ಎಲ್ಲವನ್ನು ಮೊದ್ಲೇ ಹೇಳಲ್ಲ, ಮುಂದೆ ನಿಮ್ಗೆ ಗೊತ್ತಾಗುತ್ತೆ: ಪ್ರಧಾನಿ ಮೋದಿ

ನವದೆಹಲಿ: ಇಂದು ನಾನು ಎಲ್ಲವನ್ನು ಮೊದಲೇ ಹೇಳಲು ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ನಿಮಗೆ ಎಲ್ಲವೂ ಗೊತ್ತಾಗಲಿದೆ. ಇಂದು ಭಾರತಕ್ಕೆ ದೊಡ್ಡ ಜಯ ಸಿಕ್ಕಿದೆ ಎಂದು ವಾಯುದಾಳಿಯ ವಿಜಯದ ಸಂತೋಷವನ್ನು ಪರೋಕ್ಷವಾಗಿ ಪ್ರಧಾನಿ ಮೋದಿ ಯುವಕರೊಂದಿಗೆ ಹಂಚಿಕೊಂಡರು.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ `ನ್ಯಾಷನಲ್ ಯೂತ್ ಫೆಸ್ಟಿವಲ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ, ಯುವ ಪೀಳಿಗೆ ಜೊತೆ ಸಂವಾದ ನಡೆಸಿದರು. ಸಂವಾದಕ್ಕೂ ಮುನ್ನ ಮಾತನಾಡಿ ಅವರು, ಇಂದಿನ ಯುವಕರು ಪ್ರತಿಯೊಂದರಲ್ಲಿಯೂ ಹೊಸತನವನ್ನು ಹುಡುಕುತ್ತಾರೆ. ಇಂದಿನ ಪೀಳಿಗೆಯವರು ತುಂಬಾ ಚಾಣಕ್ಷರಾಗಿರುತ್ತಾರೆ. ಕೆಲವರಿಗೆ ವಯಸ್ಸು ಆಗುತ್ತಿದೆ ಆದ್ರೆ ಬುದ್ಧಿ ಬೆಳೆಯಲ್ಲ ಅಂತಹವರನ್ನು ನಾವೆಲ್ಲ ನೋಡಿದ್ದೇವೆ. ನಿಮ್ಮ ಮನೆಯಲ್ಲಿರುವ ಮಕ್ಕಳನ್ನೇ ನೋಡಿ, ನಿಮಗಿಂತ ಚುರುಕಾಗಿರುತ್ತವೆ ಎಂದರು.

ಇಂದಿನ ಯುವ ಪೀಳಿಗೆ ಮಲ್ಟಿ ಟಾಸ್ಕಿಂಗ್ ಗಾಗಿ ಸಿದ್ಧವಿರುತ್ತದೆ. ಹಾಗಾಗಿ ಹಲವು ಕೆಲಸಗಳನ್ನು ಏಕಕಾಲದಲ್ಲಿ ಮಾಡಿ ಯಶಸ್ವಿಯಾಗುತ್ತಾರೆ. ಗುರಿಗಳನ್ನು ಬೇಗ ತಲುಪುವುದಕ್ಕಾಗಿ ಹೆಚ್ಚಿನ ಶ್ರಮ ಹಾಕುತ್ತಾರೆ. ಇದುವೇ ಹೊಸ ಭಾರತದ ಆಧಾರವಾಗಿದೆ. ಹಾಗಾಗಿ ಯುವಕರಿಗೆ ಎಲ್ಲ ವಿಭಾಗದಲ್ಲಿ ಅವಕಾಶ ಸಿಗಬೇಕು ಮತ್ತು ಪ್ರೋತ್ಸಾಹ ದೊರೆಯಬೇಕು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *