ಸೇತುವೆ ಕುಸಿದು ನದಿಗೆ ಬಿತ್ತು ಕಾರು – ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೇವಿನಕೊಪ್ಪ ಗ್ರಾಮದ ಹೊರವಲಯದಲ್ಲಿ ಸೇತುವೆ ಕುಸಿದು ನದಿಗೆ ಕಾರೊಂದು ಬಿದ್ದಿದ್ದು, ಗ್ರಾಮಸ್ಥರ ಸಮಯ ಪ್ರಜ್ಞೆ ತೋರಿ ಇಬ್ಬರನ್ನು ರಕ್ಷಿಸಿದ್ದಾರೆ.

ಮಲಪ್ರಭಾ ನದಿಗೆ ಕಟ್ಟಿದ್ದ ಸೇತುವೆ ಕುಸಿದು ಈ ಅವಘಡ ಸಂಭವಿಸಿದೆ. ಇಂಡಿಕಾ ಕಾರೊಂದು ಬೈಲಹೊಂಗಲದಿಂದ ಸವದತ್ತಿ ಕಡೆಗೆ ಹೋಗುತ್ತಿತ್ತು. ಕಾರ್ ಬೇವಿನಕೊಪ್ಪ ಗ್ರಾಮದ ಹೊರವಲಯದಲ್ಲಿರುವ ಮಲಪ್ರಭಾ ನದಿಗೆ ಕಟ್ಟಿದ್ದ ಸೇತುವೆ ಮೇಲೆ ಹೋಗುತ್ತಿತ್ತು. ಕಾರ್ ನಿಯಂತ್ರಣ ತಪ್ಪಿ ಸೇತುವೆ ತುದಿಗೆ ಹೋಗಿ ಗುದ್ದಿದೆ. ಪರಿಣಾಮ ಸೇತುವೆ ಕುಸಿದು ಕಾರು ನದಿಗೆ ಬಿದ್ದಿದೆ.

ನೀರಿನಲ್ಲಿ ತೇಲುತ್ತಿದ್ದ ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಇಬ್ಬರ ಕಿರುಚಾಟವನ್ನು ಕೇಳಿ ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿ ಹಗ್ಗದ ಸಹಾಯದಿಂದ ಇಬ್ಬರನ್ನು ರಕ್ಷಿಸಿದ್ದಾರೆ. ಬಳಿಕ ಹಗ್ಗದ ಮೂಲಕ ಕಾರನ್ನು ನದಿಯಿಂದ ಮೇಲಕ್ಕೆ ಎತ್ತಿದ್ದಾರೆ. ಈ ಘಟನೆ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *