ಆಡಿಯೋ ಅಸಲಿಯೋ..? ನಕಲಿಯೋ ತಿಳಿಯಬೇಕು: ಈಶ್ವರಪ್ಪ

ಬೆಂಗಳೂರು: ಧ್ವನಿ ಸುರಳಿಯಲ್ಲಿ ಯಾರು ಮಾತನಾಡಿದ್ದಾರೆ ಎಂಬವುದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ಯಾರ ಯಾರ ನಡುವೆ ಸಂಭಾಷಣೆ ನಡೆಯಿತು. ಎಷ್ಟು ಕೋಟಿಗೆ ಡೀಲ್ ಆಯ್ತು ಎಂಬ ಎಲ್ಲ ಮಾಹಿತಿಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಆಡಿಯೋದಲ್ಲಿ ಸ್ಪೀಕರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಪ್ರಧಾನಿ, ನ್ಯಾಯಮೂರ್ತಿಗಳ ಹೆಸರುಗಳು ಕೇಳಿ ಬಂದಿದ್ದು, ಪ್ರಜಾಪ್ರಭುತ್ವಕ್ಕೆ ದೊಡ್ಡ ಅವಮಾನ ಮಾಡಿದಂತಾಗಿದೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.

ಇದು ಕೇವಲ ರಮೇಶ್ ಕುಮಾರ್ ಅವರಿಗಾದ ವೈಯಕ್ತಿಕ ನೋವು ಅಲ್ಲ. ರಾಜ್ಯಕ್ಕೆ, ಸದನ ಹಾಗು ಸದಸ್ಯರೆಲ್ಲರಿಗಾದ ನೋವು. ಬಿಡುಗಡೆಯಾಗಿರುವ ಧ್ವನಿ ಸುರಳಿ ಫೇಕ್ ಅಲ್ಲವೋ ಹೌದೋ ಎಂಬುದರ ಬಗ್ಗೆ ತನಿಖೆ ನಡೆಯಬೇಕಿದೆ. ಆಡಿಯೋ ಅಸಲಿಯೋ ಅಥವಾ ನಕಲಿಯೋ ಎಂಬ ವಿಷಯ ಗೊತ್ತಾಗಬೇಕಿದೆ ಎಂದು ಹೇಳುವ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿದರು.

ಈಶ್ವರಪ್ಪನವರ ಮಾತಿಗೆ ಪ್ರತಿಕ್ರಿಯಿಸಿದ ಸ್ಪೀಕರ್, ಧ್ವನಿ ಸುರಳಿಯಲ್ಲಿನ ಪ್ರತಿಯೊಂದು ಪದಗಳನ್ನು ತೂಕಕ್ಕೆ ಹಾಕಿ ಸದನದಲ್ಲಿ ಮಾತನಾಡಿದ್ದೇನೆ. ಧ್ವನಿ ಸುರಳಿಯಲ್ಲಿ ಸ್ಪಷ್ಟವಾಗಿ ನನ್ನ ಹೆಸರು ಉಲ್ಲೇಖವಾಗಿದೆ. ಈ ಬಗ್ಗೆ ತನಿಖೆ ಸಹ ನಡೆಯಲಿ. ನಾನು ಆಡಿಯೋವನ್ನು ಅಸಲಿ ಎಂದು ಎಲ್ಲಿಯೂ ಹೇಳಿಲ್ಲ. ತನಿಖೆಯಲ್ಲಿ ಆಡಿಯೋ ನಕಲಿ ಎಂದು ಸಾಬೀತಾದ್ರೆ ಹೆಚ್ಚು ನೆಮ್ಮದಿಯಿಂದ ನಾನು ಉಸಿರಾಡುತ್ತೇನೆ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *