ನಿತಿನ್ ಗಡ್ಕರಿಯನ್ನ ಹೊಗಳಿದ್ರು ರಾಹುಲ್ ಗಾಂಧಿ!

-ಬಿಜೆಪಿಯಲ್ಲಿ ಗಟ್ಸ್ ಇರೋದು ನಿತಿನ್ ಗಡ್ಕರಿಗೆ ಮಾತ್ರ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಿಜೆಪಿಯ ನಾಯಕ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಕಾರ್ಯವೈಖರಿಯನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್‍ನಲ್ಲಿ ಬಿಜೆಪಿಯಲ್ಲಿ ಗಟ್ಸ್ ಇರೋ ಏಕೈಕ ನಾಯಕ ಎಂದರೆ ನಿತಿನ್ ಗಡ್ಕರಿ ಮಾತ್ರ. ಅವರು ರಫೇಲ್ ಡೀಲ್, ರೈತರ ಸಮಸ್ಯೆ ಮತ್ತು ಕೇಂದ್ರ ಸಂಸ್ಥೆಗಳ ನಾಶದ ಬಗ್ಗೆಯೂ ಮಾತನಾಡಬೇಕು ಎಂದು ರಾಹುಲ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ನಿತಿನ್ ಗಡ್ಕರಿಯವರು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಮೋದಿ ವಿರುದ್ಧ ಮಾತನಾಡಿದಕ್ಕೆ ರಾಹುಲ್ ಗಾಂಧಿ ಅವರು ನಿತಿನ್ ಗಡ್ಕರಿಯನ್ನ ಹಾಡಿ ಹೊಗಳಿದ್ದಾರೆ

ಮನೆಯವರ ಬಗ್ಗೆ ಕಾಳಜಿ ವಹಿಸದವರು ದೇಶ ನಿರ್ವಹಿಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು. ಗಡ್ಕರಿ ಜಿ, ನಿಮಗೆ ಧನ್ಯವಾದಗಳು. ಬಿಜೆಪಿಯಲ್ಲಿ ಗಟ್ಸ್ ಇರೋ ಏಕೈಕ ವ್ಯಕ್ತಿ ಎಂದರೇ ನೀವು ಮಾತ್ರ. ದಯಮಾಡಿ ರಫೇಲ್ ಹಗರಣ, ಅನಿಲ್ ಅಂಬಾನಿ, ರೈತರ ಸಂಕಷ್ಟ ಹಾಗೂ ಕೇಂದ್ರೀಯ ಸಂಸ್ಥೆಗಳ ನಾಶದ ಬಗ್ಗೆಯೂ ಮಾತನಾಡಿ ಎಂದು ಬರೆದು ನಿತಿನ್ ಗಡ್ಕರಿ ಅವರನ್ನು ಟ್ಯಾಗ್ ಮಾಡಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಬರುವ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಪ್ರಧಾನಿಯಾಗಬೇಕು ಎಂದು ಪ್ರಧಾನಿ ಕುರ್ಚಿ ಮೇಲೆ ನಿತಿನ್ ಗಡ್ಕರಿ ಕಣ್ಣೀಟ್ಟಿದ್ದಾರೆ. ಆದರಿಂದ ಇತ್ತೀಚಿನ ದಿನಗಳಲ್ಲಿ ಮೋದಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡುತ್ತಿದ್ದು, ನಿನ್ನೆ ನಾಗ್ಪುರದಲ್ಲಿ ಮಾತನಾಡಿದ ಅವರು, ಮನೆಯನ್ನು ಸರಿಯಾಗಿ ನೋಡಿಕೊಳ್ಳದವರು ದೇಶವನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ತಮ್ಮ ಜವಾಬ್ದಾರಿಗಳನ್ನು ಅರಿತು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಪರೋಕ್ಷವಾಗಿ ಮೋದಿ ಅವರ ವಿರುದ್ಧ ವ್ಯಂಗ್ಯವಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *