ಮಂಜಿನ ನಾಡಾದ ಬಿಸಿಲನಾಡು ಕೊಪ್ಪಳ – ವೈಮಾನಿಕ ಕ್ಯಾಮೆರಾದಲ್ಲಿ ಸೆರೆಯಾಯ್ತು ಹಿಮದೃಶ್ಯ

ಕೊಪ್ಪಳ: ಬಿಸಿಲನಾಡು ಎಂದೇ ಹಣೆಪಟ್ಟಿಕಟ್ಟಿಕೊಂಡಿರೋ ಜಿಲ್ಲೆಯಲ್ಲಿ ಇದೀಗ ಬಿಸಿಲಿನ ಝಳಕ್ಕೆ ಜನ ಹೊರಗೆ ಬರೋಕು ಹೆದರುತ್ತಿದ್ದರು. ಆದ್ರೆ ಇದೀಗ ಈ ನಾಡು ಎರಡು ದಿನಗಳಿಂದ ಮಲೆನಾಡಾಗಿ ಪರಿವರ್ತನೆಯಾಗಿದೆ.

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಬಿದ್ದಿರೋ ಮಂಜಿನ ಎಫೆಕ್ಟ್ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭತ್ತದ ನಾಡು ಗಂಗಾಗತಿಯಲ್ಲಿ ಉಂಟಾಗಿರೋ ಮಂಜಿನ ಎಫೆಕ್ಟ್ ಸ್ಥಳೀಯರಿಗೆ ಸಖತ್ ಖುಷಿ ನೀಡುತ್ತಿದೆ. ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿರುವ ಮಂಜಿನ ಸೊಬಗು ಇದೀಗ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.

ಸುಡು ಬಿಸಿಲಿನಿಂದ ಕೂಡಿದ್ದ ಕೊಪ್ಪಳದಲ್ಲಿ ಇದೀಗ ಮಂಜು ಕವಿದಿದೆ. ಹೀಗಾಗಿ ಇಷ್ಟು ದಿನ ಬಿಸಿಲು ಬಿಸಿಲು ಎಂದು ಹೇಳುತ್ತಿದ್ದ ಜನ ಇಂದು ಮಂಜಿನಿಂದ ಕೂಡಿದ್ದರಿಂದ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *