ಮದ್ವೆಗೆ ಹೋಗ್ತಿದ್ದಾಗ ಹೊತ್ತಿ ಉರಿದ ಕಾರ್..!

ವಿಜಯಪುರ: ರಸ್ತೆ ಮಧ್ಯೆ ಟಾಟಾ ಇಂಡಿಕಾ ಕಾರು ಹೊತ್ತಿ ಉರಿದ ಘಟನೆ ವಿಜಯಪುರದ ಇಂಡಿ ತಾಲೂಕಿನಲ್ಲಿ ನಡೆದಿದೆ.

ಇಂಜಿನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಕಾರಣ ಕಾರು ಬೆಂಕಿಗಾಹುತಿಯಾಗಿದೆ. ಜಿಲ್ಲೆಯ ಇಂಡಿ ತಾಲೂಕಿನ ಬೆನಕನಾಳ – ಅಥರ್ಗಾ ಗ್ರಾಮಗಳ ರಸ್ತೆ ಮಧ್ಯದಲ್ಲಿ ಈ ಘಟನೆ ನಡೆದಿದ್ದು, ವಿವಾಹ ಕಾರ್ಯಕ್ರಮಕ್ಕಾಗಿ ಬಾಗಲಕೋಟೆಯ ಮುಧೋಳದಿಂದ ತಾಂಬಾ ಗ್ರಾಮಕ್ಕೆ ಆಗಮಿಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಮಕ್ಕಳು ಸೇರಿ ಒಟ್ಟು ಐವರು ಕಾರ್ ನಲ್ಲಿ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಬೆಂಕಿ ಕಾಣಿಸಿದ ತಕ್ಷಣ ರಸ್ತೆ ಬದಿಗೆ ಚಾಲಕ ಕಾರ್ ನಿಲ್ಲಿಸಿದ್ದಾನೆ. ಕ್ಷಣದಲ್ಲಿ ಎಲ್ಲರೂ ಕಾರ್ ಹೊರಗಡೆ ಬಂದಿದ್ದಾರೆ. ಇದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣ ಮೂಲದ ಕಾರ್ ಇದಾಗಿದ್ದು, ಘಟನೆ ಸಂಬಂಧ ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *