ಪಾದಾಚಾರಿ ಅಪ್ಪ-ಮಗನ ಮೇಲೆ ಹರಿದ ಕಾರ್- 12 ಕಿ.ಮೀ ಬೆನ್ನತ್ತಿ ಚಾಲಕನಿಗೆ ಥಳಿತ

ಚಿಕ್ಕೋಡಿ(ಬೆಳಗಾವಿ): ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತಂದೆ ಹಾಗೂ ಮಗನ ಮೇಲೆ ಕಾರ್ ಹರಿಸಿದ್ದರಿಂದ ಸಿಟ್ಟುಗೊಂಡ ಗ್ರಾಮಸ್ಥರು ಚಾಲಕನನ್ನು ಬೆನ್ನಟ್ಟಿ ಹಿಗ್ಗಾಮುಗ್ಗ ಥಳಿಸಿದ ಘಟನೆಯೊಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನನದಿವಾಡಿ ಗ್ರಾಮದಲ್ಲಿ ನಡೆದಿದೆ.

ಕಾರು ಹರಿದ ಪರಿಣಾಮ ತಂದೆ ಆನಂದ ನಾಯಿಕ(38) ಹಾಗೂ ಮಗ ಕೃಷ್ಣಾ ನಾಯಿಕ(14) ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರು ಚಾಲಕ 30 ವರ್ಷದ ವಿಠ್ಠಲ ಪೋತದಾರ ಕುಡಿದು ತನ್ನ ವಾಹನ ಚಲಾಯಿಸಿದ್ದೇ ಘಟನೆಗೆ ಕಾರಣವಾಗಿದೆ.

ಪಾದಾಚಾರಿಗಳಾದ ತಂದೆ-ಮಗನ ಮೇಲೆ ಕಾರು ಹರಿಯುತ್ತಿದ್ದಂತೆಯೇ ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದಾರೆ. ಅಲ್ಲದೇ ತಂದೆ ಹಾಗೂ ಮಗನ ಸ್ಥಿತಿ ಕಂಡು ರೊಚ್ಚಿಗೆದ್ದ ಗ್ರಾಮಸ್ಥರು 12 ಕಿಲೋಮೀಟರ್ ಬೆನ್ನಟ್ಟಿ ಕುಡುಕ ಚಾಲಕನನ್ನು ಚೆನ್ನಾಗಿ ಥಳಿಸಿದ್ದಾರೆ. ಅಲ್ಲದೇ ಕಾರಿನ ಗ್ಲಾಸ್ ಪುಡಿಗೈದಿದ್ದಾರೆ.

ಈ ಘಟನೆ ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *