ಧಾರವಾಡ: ಗಣರಾಜ್ಯೋತ್ಸವಕ್ಕೆ ತೆರಳುತ್ತಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ಕಾರ್ ಹರಿದ ಘಟನೆ ಧಾರವಾಡದ ವಾಟರ್ ಬೋರ್ಡ್ ಬಳಿ ಇಂದು ನಡೆದಿದೆ.
ಪ್ರೀನಿಪಾಲ್ ಸುನಿತಾ ಕಡಪಟ್ಟಿ, ವಿದ್ಯಾರ್ಥಿಗಳಾದ ಪೂಜಾ ನಿಡಗುಂದಿ, ಚೈತ್ರಾ ಕೊಪ್ಪದ, ಅನ್ನಪೂರ್ಣ ಚಲವಾದಿ ಗಾಯಗೊಂಡವರಾಗಿದ್ದಾರೆ. ಘಟನೆಯಲ್ಲಿ ಒಟ್ಟು ಆರು ವಿದ್ಯಾರ್ಥಿಗಳ ಮೇಲೆ ಕಾರ್ ಹರಿದಿದ್ದು, ಇದರಲ್ಲಿ ನಾಲ್ವರಿಗೆ ಗಂಭಿರ ಗಾಯ ಇಬ್ಬರಿಗೆ ಸಣ್ಣ ಪುಟ್ಟಗಾಯಗಳಾಗಿದೆ. ಗಾಯಗೊಂಡ ವಿದ್ಯಾರ್ಥಿಗಳೆಲ್ಲರೂ ಧಾರವಾಡದ ಕೆಇಬೊರ್ಡ್ ಕಾಲೇಜಿನವರಾಗಿದ್ದಾರೆ.

ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಎಸ್ ಡಿ ಎಮ್ ಗೆ ಗಾಯಾಳುಗಳ ಸ್ಥಳಾಂತರ ಮಾಡಲಾಗಿದೆ. ಅರವಿಂದ ಎಸ್. ಹೆಬ್ಸೂರು ಅವರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಈ ಘಟನೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply