ಓದುವುದರ ಜೊತೆಗೆ ಸಿದ್ದಗಂಗಾ ವಿದ್ಯಾರ್ಥಿಗಳು ಗದ್ದೆ ಕೆಲಸಕ್ಕೂ ಸೈ!

ಸಿದ್ದಗಂಗಾ ಶ್ರೀಗಳು ಕಾಯಕ ಯೋಗಿ. ಪೂಜ್ಯ ಶ್ರೀಗಳ ಮಠದಲ್ಲಿ ಕಲಿಯುವ ಅಷ್ಟು ವಿದ್ಯಾರ್ಥಿಗಳಿಗೆ ಮಣ್ಣಿನೊಂದಿಗೆ ಬೆರೆತು ಕೆಲಸ ಮಾಡುವುದು ಗೊತ್ತಿದೆ. ಗದ್ದೆಯ ಕೆಲಸವೂ ಗೊತ್ತಿದೆ.

ಇಲ್ಲಿನ ಶಿಕ್ಷಣ ಕ್ಷೇತ್ರ ಕೇವಲ ಪಠ್ಯವಿಷಯಗಳಿಗಷ್ಟೇ ಸೀಮಿತವಾಗಿಲ್ಲ. ಸಮರ್ಥ ವ್ಯಕ್ತಿನಿರ್ಮಾಣದ ಕೆಲ್ಸವಾಗತ್ತದೆ. ಪ್ರತಿನಿತ್ಯವೂ ಮಠದ ಆವರಣದಲ್ಲಿ ಎಂಟು ಸಾವಿರ ವಿದ್ಯಾರ್ಥಿಗಳು ಸಾಮೂಹಿಕ ಪ್ರಾರ್ಥನೆ ಮಾಡುವ ಆ ಒಂದು ದೃಶ್ಯ. ಇದೆಯಲ್ಲ ಅದು ಶ್ರೀಗಳ ಧೀ ಶಕ್ತಿಗೆ ಸಾಕ್ಷಿ.

ಮುಂಜಾನೆಯ ಬೆಳಕಲ್ಲಿ, ಸಂಜೆಯ ಹೊಂಬೆಳಕಲ್ಲಿ ಪ್ರಶಾಂತ ಬಯಲು ಪ್ರಾರ್ಥನೆಯ ಆಲಯವಾಗಿ ಬಿಡುತ್ತದೆ. ಇಲ್ಲಿಯ ಮಕ್ಕಳು ಗದ್ದೆ ಕೆಲ್ಸಕ್ಕೆ ಸೈ. ಮಠದಲ್ಲಿ ನಡೆಯುವ ಶ್ರಮದಾನದ ಕೆಲ್ಸದಲ್ಲಿ ವಿದ್ಯಾರ್ಥಿಗಳು ಮುಂಚೂಣಿಯಲ್ಲಿರುತ್ತಾರೆ.

ಅಂಧರಿಗೂ ಇಲ್ಲಿದೆ ಶಾಲೆ:
ಸಿದ್ದಗಂಗಾ ಮಠ ತಮ್ಮ ಪಾಲಿಗೆ ಲೋಕವೇ ಕತ್ತಲೆಯೆನಿಸಿದ ನೂರಾರು ಅಂಧಮಕ್ಕಳ ಪಾಲಿಗೆ ಬೆಳಕಿನ ಸೆಲೆಯಾಗಿದೆ. ಮಠದ ಮಾನವೀಯ ಸೇವೆಗೆ ಸಾಕ್ಷಿಯಾಗಿ ಅಂಧರ ಶಾಲೆಯೂ ಇದೆ. ಅಂಧಮಕ್ಕಳಿಗೆ ಉಚಿತ ಊಟ ವಸತಿ ಪಾಠ ಪ್ರವಚನಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಷ್ಟೆ ಅಲ್ಲ ಪೂಜ್ಯರಿಗೆ ಈ ಅಂಧ ಮಕ್ಕಳ ಮೇಲೆ ವಿಶೇಷ ಪ್ರೀತಿ ಗುರುಗಳು ಹೆಸರಿಡಿದು ಮಕ್ಕಳನ್ನು ಕರೆಯುತ್ತಿದ್ರೆ ಕತ್ತಲೆಯ ಲೋಕದ ಈ ಕಂದಮ್ಮಗಳಿಗೆ ಬೆಳಕೊಂದು ಮೂಡಿ ಬಂದ ಅನುಭವವಾಗುತಿತ್ತು.

https://www.youtube.com/watch?v=FbJf6G0kt3E

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *