ಯೂ ಡೋಂಟ್ ನೋ ಕನ್ನಡ?, ಯು ಹಾವ್ ಟು ಲರ್ನ್- ಮಾಜಿ ಸಿಎಂ ಕ್ಲಾಸ್

ಬಾಗಲಕೋಟೆ: ಕನ್ನಡ ಮಾತನಾಡದ ಸಿಬ್ಬಂದಿ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಬಾದಾಮಿ ಕ್ಷೇತ್ರದ ಪ್ರವಾಸದಲ್ಲಿರುವ ಮಾಜಿ ಸಿಎಂ ಇಂದು ಬಾದಾಮಿ ಕ್ಷೇತ್ರದ ಐತಿಹಾಸಿಕ ಸ್ಥಳ ಪಟ್ಟದಕಲ್ಲಿನಲ್ಲಿ ಪುರಾತತ್ವ ಇಲಾಖೆ ಸಿಬ್ಬಂದಿ ಎಸ್.ಕೆ ಭಗತ್ ಸೇರಿ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರವಾಸಿ ತಾಣ ವೀಕ್ಷಣೆ ವೇಳೆ ಸಿಬ್ಬಂದಿ ಇಂಗ್ಲಿಷ್‍ನಲ್ಲಿ ಸ್ಥಳ ಪರಿಸ್ಥಿತಿ ವಿವರಿಸೋಕೆ ಮುಂದಾದರು. ಸಿಬ್ಬಂದಿ ಇಂಗ್ಲಿಷ್ ನಲ್ಲಿ ಮಾತಾಡುತ್ತಿದ್ದಂತೆ ಅವರ ವಿರುದ್ಧ ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಯು ಡೋಂಟ್ ನೊ ಕನ್ನಡ. ಯು ಆರ್ ನೊ ಗವರ್ನಮೆಂಟ್ ಆಪ್ ಇಂಡಿಯಾ?. ಬೊತ್ ಆಫ್ ಯು, ವೈ ಯು ಆರ್ ನಾಟ್ ಲರ್ನ್ ಕನ್ನಡ?. ಹೌ ಲಾಂಗ್ ಯು ಹಿಯರ್? ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ ಈ ವೇಳೆ ಸಿಬ್ಬಂದಿ ವಿ ವಿಲ್ ಟ್ರೈ ಎಂದಿದ್ದಕ್ಕೆ ನೊ ಕ್ವೆಶ್ಚನ್ ಆಫ್ ಟ್ರೈ, ಯು ಹಾವ್ ಟು ಲರ್ನ್ ಕನ್ನಡ ಎಂದು ಕಿಡಿಕಾರಿದ್ದಾರೆ.

ಶುಕ್ರವಾರದಿಂದ ಬಾದಾಮಿ ಕ್ಷೇತ್ರ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಹಾಗು ಸಾ.ರಾ ಮಹೇಶ್, ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಇಂದು ಬನಶಂಕರಿ ದೇವಿ ದರ್ಶನ ಪಡೆದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *