ಕೆಆರ್‌ಎಸ್‌ ನೀರಿನಲ್ಲಿ ಮೋಜು-ಮಸ್ತಿ: ಭದ್ರತೆ ಲೆಕ್ಕಿಸದೆ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ ಉದ್ಯಮಿ

ಮಂಡ್ಯ: ಭದ್ರತೆ ಲೆಕ್ಕಿಸದೆ ಮೈಸೂರಿನ ಉದ್ಯಮಿಯೊಬ್ಬರು ಕೆಆರ್‌ಎಸ್‌ ನೀರಿನಲ್ಲಿ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿ ಮೋಜು-ಮಸ್ತಿ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್‌ ಡ್ಯಾಂನ ಹಿನ್ನೀರಲ್ಲಿ ಉದ್ಯಮಿ ವಿಕ್ರಂ ಗುಪ್ತಾ ತಮ್ಮ ಪುಂಡಾಟ ಮೆರೆದಿದ್ದಾರೆ. ಭದ್ರತೆ ಲೆಕ್ಕಿಸದೆ ವಿಕ್ರಂ ಅಣೆಕಟ್ಟಿನ ನೀರಲ್ಲಿ ಬೇಕಾಬಿಟ್ಟಿಯಾಗಿ ಕಾರು ಚಾಲನೆ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಕ್ರಂ ಮೈಸೂರಿನ ಉದ್ಯಮಿಯಾಗಿದ್ದು, ಕೆಆರ್‌ಎಸ್‌ನಲ್ಲೂ ಸ್ವಂತ ಮನೆ ಹೊಂದಿದ್ದಾರೆ. ಕೆಆರ್‌ಎಸ್‌ ಹಿನ್ನೀರಿನಲ್ಲಿ ತನ್ನ ಎಸ್‍ಯುವಿ ವೆಹಿಕಲ್‍ನಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಇವರ ರೇಸಿಂಗ್ ಅವತಾರ ನೋಡಿಯೂ ಡ್ಯಾಂನಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಕೂಡ ಸೈಲೆಂಟ್ ಆಗಿದ್ದರು.

ಈ ಬಗ್ಗೆ ಕಾವೇರಿ ನೀರಾವರಿ ನಿಗಮ ಎಇ ಬಸವರಾಜೇಗೌಡ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, “ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ನಾನು 2 ದಿನ ಕೋಲ್ಕತ್ತಾಗೆ ಕೆಲಸಕ್ಕೆಂದು ಹೋಗಿ ಇಂದು ಬೆಳಗ್ಗೆ ಬಂದೆ. ಹಿನ್ನೀರಿನಲ್ಲಿ ಸಾಕಷ್ಟು ರಸ್ತೆಗಳು ಇರುವ ಕಾರಣ ಜನಗಳು ಬರುತ್ತಾರೆ. ಈ ರೀತಿ ಮಾಡುವವರ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಬಗ್ಗೆ ವೀಕ್ಷಿಸಿ ನಾವು ಆ ವ್ಯಕ್ತಿ ವಿರುದ್ಧ ಕ್ರಮಗೈಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

ಕೆಆರ್‌ಎಸ್‌ ಸೂಕ್ಷ್ಮ ಪ್ರದೇಶ ವ್ಯಾಪ್ತಿಗೆ ಸೇರಿದ್ದು, ಸಾಮಾನ್ಯ ಜನರನ್ನು ಅಣೆಕಟ್ಟು ಬಳಿ ಬಿಡಲು ಭದ್ರತಾ ಸಿಬ್ಬಂದಿ ನಿರಾಕರಿಸುತ್ತಾರೆ. ಆದ್ರೆ ಇವರಿಗೆ ಯಾಕೆ ಅವಕಾಶ ನೀಡಿದ್ದೀರಿ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯ ಇಬ್ಬಗೆ ನೀತಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಸಾಮಾನ್ಯ ಜನರನ್ನು ಅಣೆಕಟ್ಟು ಬಳಿ ಬಿಡದ ಭದ್ರತಾ ಸಿಬ್ಬಂದಿ ಹಾಗೂ ಉದ್ಯಮಿ ನಡೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ…

https://www.youtube.com/watch?v=jujoFIfUf8w

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *