ಬದಲಾದವು ಸಚಿವ ಸ್ಥಾನ- ಯಾರಿಗೆ ಯಾವ ಖಾತೆ?

ಬೆಂಗಳೂರು: ಭಾರೀ ಕುತುಹಲಕ್ಕೆ ಕಾರಣವಾಗಿದ್ದ ಖಾತೆ ಹಂಚಿಕೆ ಕೊನೆಗೊಂಡಿದ್ದು, ಕೆಲವು ಸಚಿವರ ಖಾತೆಗಳು, ಜವಾಬ್ದಾರಿಗಳು ಬದಲಾಗಿವೆ. ಈ ಮೂಲಕ ಕಾಂಗ್ರೆಸ್‍ನಲ್ಲಿದ್ದ ಖಾತೆ ಹಂಚಿಕೆ ಹಗ್ಗ-ಜಗ್ಗಾಟ ಕೊನೆಗೊಂಡಿದೆ.

ನೂತನ ಸಚಿವರಿಗೆ ಯಾವ ಖಾತೆ?:
ಖಾತೆಗಳನ್ನು ಮರು ಹಂಚಿಕೆ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಸಚಿವರಾದ ಎಂ.ಬಿ.ಪಾಟೀಲ್ ಅವರಿಗೆ ಗೃಹ ಇಲಾಖೆ. ತುಕಾರಾಂ ಅವರಿಗೆ ವೈದ್ಯಕೀಯ ಶಿಕ್ಷಣ, ಸತೀಶ್ ಜಾರಕಿಹೊಳಿ ಅವರಿಗೆ ಅರಣ್ಯ ಖಾತೆ ಸೇರಿವೆ. ಉಳಿದಂತೆ ಪೌರಾಡಳಿತ ಖಾತೆ ಸಿ.ಎಸ್.ಶಿವಳ್ಳಿ, ಮುಜರಾಯಿ ಹಾಗೂ ಕೌಶಲಾಭಿವೃದ್ಧಿ ಪರಮೇಶ್ವರ್ ನಾಯ್ಕ್, ಯುವಜನ ಸೇವೆ ಮತ್ತು ಕ್ರೀಡೆ ರಹೀಂ ಖಾನ್, ಸಕ್ಕರೆ, ಬಂದರು, ಜಲಸಾರಿಗೆ ಆರ್.ಬಿ.ತಿಮ್ಮಾಪುರ್, ವಸತಿ ಎಂಟಿಬಿ ನಾಗರಾಜ್ ಅವರ ತೆಕ್ಕೆ ಸೇರಿವೆ.

ಖಾತೆ ಚೇಂಜ್:
ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ಅವರಿಗೆ ಗೃಹ ಖಾತೆ ಕೈ ತಪ್ಪಿದ್ದು, ಹೆಚ್ಚುವರಿಯಾಗಿ ಕೃಷ್ಣ ಬೈರೇಗೌಡ ಬಳಿ ಇದ್ದ ಕಾನೂನು-ಸಂಸದೀಯ ವ್ಯವಹಾರ ಖಾತೆಯನ್ನು ನೀಡಲಾಗಿದೆ. ಅಷ್ಟೇ ಅಲ್ಲದೆ ಐಟಿ-ಬಿಟಿ ಖಾತೆ ಕೂಡ ಪರಮೇಶ್ವರ್ ಪಾಲಿಗೆ ಸೇರಿಕೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಖಾತೆಯು ಸಚಿವೆ ಜಯಮಾಲ ಅವರಿಂದ ಡಿ.ಕೆ.ಶಿವಕುಮಾರ್ ಅವರಿಗೆ ಶಿಫ್ಟ್ ಆಗಿದೆ. ಸಿಎಂ ಕುಮಾರಸ್ವಾಮಿ ಬಳಿ ಇದ್ದ ವಾರ್ತಾ ಖಾತೆ ಡಿ.ಕೆ.ಶಿವಕುಮಾರ್ ಸುಪರ್ದಿಗೆ ಸೇರಿದ್ದು, ವೈದ್ಯಕೀಯ ಖಾತೆ ತುಕಾರಾಂ ಅವರಿಗೆ ವರ್ಗಾವಣೆಯಾಗಿದೆ. ಇತ್ತ ಕೆಜೆ ಜಾರ್ಜ್ ಬಳಿ ಇದ್ದ ಐಟಿ-ಬಿಟಿ, ಸಕ್ಕರೆ ಖಾತೆ ಕೈತಪ್ಪಿ ಕೇವಲ ಬೃಹತ್ ಕೈಗಾರಿಕೆ ಖಾತೆ ಮಾತ್ರ ಉಳಿದುಕೊಂಡಿದೆ.

ಅಂತಿಮ ಪಟ್ಟಿ ಹೀಗಿದೆ:
* ಪರಮೇಶ್ವರ್ – ಬೆಂಗಳೂರು ನಗರಾಭಿವೃದ್ಧಿ, ಐಟಿ-ಬಿಟಿ, ಕಾನೂನು & ಸಂಸದೀಯ ವ್ಯವಹಾರ
* ಆರ್.ವಿ.ದೇಶಪಾಂಡೆ – ಕಂದಾಯ
* ಡಿ.ಕೆ.ಶಿವಕುಮಾರ್ – ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
* ಕೆ.ಜೆ. ಜಾರ್ಜ್ – ಬೃಹತ್ ಕೈಗಾರಿಕೆ,
* ಕೃಷ್ಣಬೈರೇಗೌಡ – ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್,
* ಯು.ಟಿ.ಖಾದರ್ – ನಗರಾಭಿವೃದ್ಧಿ
* ಜಮೀರ್ ಅಹ್ಮದ್ – ಆಹಾರ ಮತ್ತು ನಾಗರಿಕ ಪೂರೈಕೆ, ಅಲ್ಪಸಂಖ್ಯಾತ ಕಲ್ಯಾಣ
* ರಾಜಶೇಖರ್ ಪಾಟೀಲ್ – ಗಣಿ ಮತ್ತು ಭೂ ವಿಜ್ಞಾನ
* ಜಯಮಾಲ – ಮಹಿಳಾ & ಮಕ್ಕಳ ಕಲ್ಯಾಣ,

* ಎಂ.ಬಿ.ಪಾಟೀಲ್ – ಗೃಹ ಇಲಾಖೆ
* ತುಕಾರಾಂ – ವೈದ್ಯಕೀಯ ಶಿಕ್ಷಣ
* ಸತೀಶ್ ಜಾರಕಿಹೊಳಿ – ಅರಣ್ಯ
* ಸಿ.ಎಸ್.ಶಿವಳ್ಳಿ – ಪೌರಾಡಳಿತ
* ಪರಮೇಶ್ವರ್ ನಾಯ್ಕ್ – ಮುಜರಾಯಿ, ಕೌಶಲಾಭಿವೃದ್ಧಿ
* ರಹೀಂ ಖಾನ್ – ಯುವಜನ ಸೇವೆ, ಕ್ರೀಡೆ
* ಆರ್.ಬಿ.ತಿಮ್ಮಾಪುರ್ – ಸಕ್ಕರೆ,
* ಎಂಟಿಬಿ ನಾಗರಾಜ್ – ವಸತಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *