ಅಂಗಡಿ ಮುಂದೆ ಹಾಕಿದ್ದ ನೀರಿನಿಂದ ಜಾರಿ ಬಿದ್ದಿದ್ದಕ್ಕೆ ಮಾಲೀಕನ ಕೊಲೆ!

                                     ಆಕಾಶ್

ಬೆಂಗಳೂರು: ಅಂಗಡಿ ಮುಂದೆ ಮಾಲೀಕ ನೀರು ಹಾಕುತ್ತಿದ್ದಾಗ, ಬೈಕಿನಲ್ಲಿ ಬರುತ್ತಿದ್ದ ಸವಾರ ಜಾರಿ ಕೆಳಗೆ ಬಿದ್ದಿದ್ದಾನೆ. ಇದರಿಂದ ಕೋಪಗೊಂಡ ಬೈಕಲ್ ಸವಾರ ಅಂಗಡಿ ಮಾಲೀಕನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನ ಕುರುಬರಹಳ್ಳಿ ಸರ್ಕಲ್ ನಲ್ಲಿ ನಡೆದಿದೆ.

ಕುರುಬರಹಳ್ಳಿ ನಿವಾಸಿವಾದ ಮಂಜುನಾಥ್ ಕೊಲೆಯಾದ ದುರ್ದೈವಿ. ಇವರು ಕಾಂಡಿಮೆಂಟ್ಸ್ ಅಂಗಡಿಯಿಟ್ಟುಕೊಂಡಿದ್ದರು. ಎಂದಿನಂತೆ ಬೆಳಗ್ಗೆ 5 ಗಂಟೆಗೆ ಎದ್ದು ಅಂಗಡಿ ತೆರೆಯಲು ಮುಂದಾಗಿದ್ದಾರೆ. ಇದಕ್ಕೂ ಮುನ್ನ ಅಂಗಡಿಯ ಮುಂದೆ ನೀರು ಹಾಕಲು ಹೋದಾಗ ಇದೇ ಮಾರ್ಗದಲ್ಲಿ ತನ್ನ ಬುಲೆಟ್ ಬೈಕ್‍ನಲ್ಲಿ ಬರುತ್ತಿದ್ದ ಸಾಫ್ಟ್ ವೇರ್ ಉದ್ಯೋಗಿ ಆಕಾಶ್ ಎಂಬಾತನಿಗೆ ನೀರು ಬಿದ್ದಿದೆ. ಪರಿಣಾಮ ಆಕಾಶ್ ಸ್ಲಿಪ್ ಆಗಿ ಕೆಳಗೆ ಬಿದ್ದಿದ್ದಾನೆ. ನೀವು ಹಾಕಿದ ನೀರಿನಿಂದಲೇ ನಾನು ಕೆಳಗೆ ಬಿದ್ದೆ ಅಂತ ಮಂಜುನಾಥ್ ಜಗಳ ಕೂಡ ಶುರು ಮಾಡಿದ್ದಾನೆ ಎಂದು ಉತ್ತರ ವಲಯ ಡಿಸಿಪಿ ಚೇತನ್ ಸಿಂಗ್ ರಾಥೋರ್ ಹೇಳಿದ್ದಾರೆ.

ಈ ಗಲಾಟೆ ವಿಕೋಪಕ್ಕೆ ಹೋಗಿ ಅಂಗಡಿ ಮಾಲೀಕ ಮಂಜುನಾಥ್ ಮತ್ತು ಸಾಫ್ಟ್ ವೇರ್ ಉದ್ಯೋಗಿ ಆಕಾಶ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನಂತರ ಈ ಗಲಾಟೆ ನೋಡಿದ ಮಂಜುನಾಥ ಮಗ ಮನೋಜ್ ಕೂಡ ಗಲಾಟೆ ಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿ ಮೂವರು ಕೊನೆಗೆ ಚಾಕು, ಕಬ್ಬಿಣದ ರಾಡ್ ಹಿಡಿದು ಜಗಳವಾಡಿದ್ದಾರೆ.

ಕೊನೆಗೆ ಈ ಜಗಳದಲ್ಲಿ ಮೂವರು ಪರಸ್ಪರ ಚಾಕು, ಕಬ್ಬಿಣದ ರಾಡ್‍ಗಳಿದ್ದ ಹೊಡೆದಾಡಿಕೊಂಡಿದ್ದು, ಪರಿಣಾಮ ಅಂಗಡಿ ಮಾಲೀಕ ಮಂಜುನಾಥ್ ಮೃತಪಟ್ಟಿದ್ದಾನೆ. ಮಂಜುನಾಥ್ ಮಗ ಮನೋಜ್ ಮತ್ತು ಸಾಫ್ಟ್ ವೇರ್ ಉದ್ಯೋಗಿ ಆಕಾಶ್ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *