ಮುತ್ತಿನ ನಗರಿಯಲ್ಲಿ ಯಶ್ ತೆಲುಗು ಚಮಕ್!

-ತೆಲುಗಿನಲ್ಲಿ ಮಾತಾಡಿದ್ದು ಯಾಕೆ? ವೇದಿಕೆಯಲ್ಲೇ ರಾಕಿ ಸ್ಪಷ್ಟನೆ

ಹೈದರಾಬಾದ್: ಭಾನುವಾರ ಸಂಜೆ ಹೈದರಾಬಾದ್ ನಲ್ಲಿ ನಡೆದ ಕೆಜಿಎಫ್ ಚಿತ್ರದ ಕಾರ್ಯಕ್ರಮದಲ್ಲಿ ನಟ ಯಶ್ ಅಲ್ಲಿಯ ಅಭಿಮಾನಿಗಳಿಗಾಗಿ ತೆಲುಗು ಭಾಷೆಯಲ್ಲಿ ಮಾತನಾಡುವ ಮೂಲಕ ಖುಷಿ ನೀಡಿದರು. ಎಲ್ಲರಿಗೂ ನಮಸ್ಕಾರ ಎಂದು ಮಾತು ಆರಂಭಿಸಿದ ಯಶ್, ನನಗೆ ಅಷ್ಟಾಗಿ ತೆಲುಗು ಭಾಷೆಯ ಮೇಲೆ ಹಿಡಿತವಿಲ್ಲ. ಆದ್ರೂ ನಿಮಗೆಲ್ಲರಿಗಾಗಿ ನಿಧಾನವಾದ್ರೂ ನಿಮ್ಮ ಮಾತೃ ಭಾಷೆಯಲ್ಲಿ ಮಾತನಾಡುತ್ತೇನೆ. ಪದಗಳ ಬಳಕೆಯಲ್ಲಿ ಮಿಸ್ಟೇಕ್ ಆದ್ರೆ ಕ್ಷಮಿಸಿ ಅಂತಾ ಹೇಳಿದ್ರು.

ನೀನು ಎಲ್ಲಿ ಹೋಗ್ತಿಯಾ? ಅಲ್ಲಿಯ ಭಾಷೆಗೆ, ಸಂಸ್ಕೃತಿಗೆ ಗೌರವ ನೀಡಬೇಕು. ಯಾಕೆಂದರೆ ಅಲ್ಲಿಯ ಜನರು ನಮ್ಮಲ್ಲಿ ತಮ್ಮತನವನ್ನು ನೋಡುತ್ತಾರೆ. ಕರ್ನಾಟಕದಲ್ಲಿಯೂ ನಮ್ಮ ಕಲಾವಿದರು ಕನ್ನಡ ಮಾತನಾಡಲಿ ಎಂದು ಕರುನಾಡ ಜನರು ಆಸೆ ಪಡುತ್ತಾರೆ. ಹಾಗೆಯೇ ನಿಮಗೂ ಹೊಸ ನಟ ನಮ್ಮ ಮಾತೃ ಭಾಷೆ ಬಳಸಲಿ ಎಂಬ ಭಾವನೆ ಇರುತ್ತೆ. ಹಾಗಾಗಿ ನಾನಿಂದು ನಿಮಗಾಗಿ ನಿಮ್ಮ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ ಅಂತಾ ಯಶ್ ತಿಳಿಸಿದರು.

ಕೆಜಿಎಫ್ ಚಿತ್ರ ನನ್ನಿಂದ ಮಾತ್ರ ಆಗಲ್ಲ. ತೆರೆಯ ಹಿಂದೆ ಹಲವರು ಕೆಲಸ ಮಾಡಿದ್ದು, ಇಡೀ ತಂತ್ರಜ್ಞರ ಶ್ರಮ ಕೆಜಿಎಫ್ ಚಿತ್ರದಲ್ಲಿದೆ. 12 ವರ್ಷಗಳ ಹಿಂದೆ ಶೋಭು ಸರ್ ಧಾರಾವಾಹಿಯಲ್ಲಿ ನಟಿಸಿದ್ದೇನೆ. ನಮ್ಮ ಚಿತ್ರದ ಬಿಡುಗಡೆಗೆ ಶೋಭು ಸರ್, ಸಾಯಿ ಸರ್ ಮತ್ತು ರಾಜಮೌಳಿ ಸರ್ ತುಂಬಾನೇ ಸಹಾಯ ಮಾಡಿದ್ದಾರೆ. ತೆಲುಗು, ತಮಿಳು, ಮಲೆಯಾಳ, ಕನ್ನಡ, ಹಿಂದಿ ಇಂಡಸ್ಟ್ರಿ ಅಂತಾ ಯಾವುದು ಬೇರೆ ಅಲ್ಲ. ಎಲ್ಲವೂ ಭಾರತದ ಸಿನಿಮಾಗಳು. ನಮ್ಮಲ್ಲಿ ಅವರ ಚಿತ್ರಗಳಿಗೆ ನಾವು ಸಹಾಯ ಮಾಡೋದು, ನಮ್ಮ ಸಿನಿಮಾಗಳಿಗೆ ನಾವು ಸಹಾಯ ಮಾಡುತ್ತೇವೆ. ಹೀಗೆ ಎಲ್ಲರಲ್ಲಿ ಹೊಂದಾಣಿಕೆ ಬಂದಾಗ ಎಲ್ಲ ಸಿನಿಮಾಗಳಿಗೆ ಮಾರುಕಟ್ಟೆ ಲಭ್ಯವಾಗುತ್ತದೆ ಎಂದು ಯಶ್ ಆಶಯ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *