KSRTC ಬಸ್ ಕಂಡಕ್ಟರ್ ಮೇಲೆ ಪ್ರಯಾಣಿಕರಿಂದ ಮಾರಣಾಂತಿಕ ಹಲ್ಲೆ

ತುಮಕೂರು: ಕುಡಿದ ಮತ್ತಿನಲ್ಲಿದ್ದ ಐವರು ಪ್ರಯಾಣಿಕರು ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಕಬ್ಬಿಣದ ಉಕ್ಕಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.

ಕುಣಿಗಲ್ ಡಿಪೋ ನಿರ್ವಾಹಕ ಧನಂಜಯ್ ತಲೆಗೆ ಗಂಭೀರ ಗಾಯವಾಗಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿಂದ ತುಮಕೂರಿಗೆ ಹೊರಟಿದ್ದ ಬಸ್ಸಲ್ಲಿ ಸಂತೆಮಾವತ್ತೂರು ಬಳಿ ಐವರು ಪಾನಮತ್ತ ಪ್ರಯಾಣಿಕರು ಹತ್ತಿಕೊಂಡಿದ್ದರು.

ನಂತರ ಬಸ್ ಸ್ವಲ್ಪ ದೂರ ಹೋಗುತ್ತಿದ್ದಂತೆ ಒಂದೇ ಸಮನೆ ಐವರು ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಕಂಡಕ್ಟರ್ ಧನಂಜಯ್ ಸುಮ್ಮನಿರುವಂತೆ ತಾಕೀತು ಮಾಡಿದಕ್ಕೆ ಆಕ್ರೋಶಗೊಂಡ ಪಾನಮತ್ತರು ತಮ್ಮ ಬಳಿ ಇದ್ದ ಕಬ್ಬಿಣದ ಉಕ್ಕಿನಿಂದ ಕಂಡಕ್ಟರ್ ತಲೆಗೆ ಬಲವಾಗಿ ಹೊಡೆದಿದ್ದಾರೆ. ಪರಿಣಾಮ ಉಕ್ಕು ಕಂಡಕ್ಟರ್ ತಲೆಗೆ ಚುಚ್ಚಿಕೊಂಡು ರಕ್ತಸ್ರಾವವಾಗಿದೆ.

ಬಸ್‍ನಲ್ಲಿದ್ದ ಇನ್ನುಳಿದ ಪ್ರಯಾಣಿಕರು ತಕ್ಷಣ ಗಾಯಗೊಂಡ ಕಂಡಕ್ಟರ್‍ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಕುರಿತು ಪ್ರಯಾಣಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *