ಉದ್ಯಾನ ನಗರಿ ಜನರೇ ಎಚ್ಚರ ಎಚ್ಚರ.. – ಮತ್ತೆ ಸಿಟಿಗೆ ಓಜಿಕುಪ್ಪಂ ಗ್ಯಾಂಗ್ ಎಂಟ್ರಿ

ಬೆಂಗಳೂರು: ಸಿಲಿಕಾನ್ ಜನರೇ ಹುಷಾರಾಗಿರಿ. ಹಣ ಕ್ಯಾರಿ ಮಾಡುವಾಗ ಇದ್ದಕ್ಕಿದ್ದಂತೆ ನಿಮ್ಮ ಹಣ ಮಾಯವಾಗುತ್ತದೆ. ಯಾಕೆಂದರೆ ಸಿಟಿಗೆ ಸೈಲೆಂಟ್ ಆಗಿ 30 ಜನರ ಓಜಿಕುಪ್ಪಂ ಗ್ಯಾಂಗ್ ಎಂಟ್ರಿ ಕೊಟ್ಟಿದ್ದಾರೆ.

ಹೌದು… ಕೆಲ ವರ್ಷಗಳ ಹಿಂದೆ ಬೆಂಗಳೂರು ಜನತೆಯ ನಿದ್ದೆಗೆಡಿಸಿದ್ದ ಗ್ಯಾಂಗ್ ನಲ್ಲಿ ಪ್ರಮುಖವಾದದ್ದು ಓಜಿಕುಪ್ಪಂ ಗ್ಯಾಂಗ್ ಒಂದಾಗಿದೆ. ಈ ಗ್ಯಾಂಗ್ ಆಂಧ್ರದಿಂದ ರೈಲುಗಳ ಮೂಲಕ ನಗರಕ್ಕೆ ಎಂಟ್ರಿಯಾಗುತ್ತವೆ. ಎಂಟ್ರಿಯಾದ ತಕ್ಷಣ ಹೊಸ ಸಿಮ್ ಖರೀದಿ ಮಾಡಿ ಕೆಲಸ ಮುಗಿದ ತಕ್ಷಣ ಅಲ್ಲೇ ಎಸೆದು ಪರಾರಿಯಾಗುತ್ತಾರೆ.

ಇವರು ರೈಲ್ವೆ ನಿಲ್ದಾಣದ ಆಸುಪಾಸುಗಳಲ್ಲೇ ವಾಸ ಮಾಡುತ್ತಾರೆ. ಈ ಗ್ಯಾಂಗ್ ಜನರ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ಎತ್ತಿದ ಕೈ. ಅದರಲ್ಲೂ ಪ್ರಮುಖವಾಗಿ ಬ್ಯಾಂಕ್ ಗಳಿಂದ ಹಣ ತೆಗೆದುಕೊಂಡು ಹೊರಬರುವವರನ್ನೇ ಟಾರ್ಗೆಟ್ ಮಾಡುತ್ತಾರೆ. ಬಳಿಕ ನಿಮ್ಮ ಕಾರು ಪಂಚರ್ ಆಗಿದೆ, ನಿಮ್ಮ ದುಡ್ಡು ಕೆಳಗೆ ಬಿದ್ದಿದೆ ಮತ್ತು ಬಟ್ಟೆ ಮೇಲೆ ಗಲೀಜು ಆಗಿದೆ ಅಂತ ಗಮನ ಬೇರೆಡೆ ಸೆಳೆದು ಕ್ಷಣಾರ್ಧದಲ್ಲಿ ಹಣ ಕದ್ದು ಪರಾರಿಯಾಗುತ್ತಾರೆ. ಎಸ್ಕೇಪ್ ಆಗ್ತಾರೆ.

ಒಂದು ಬಾರಿ ಇವರು ಹಣ ಕದ್ದು ಹೋದರೆ ವರ್ಷಗಳೆ ಕಳೆದು ಹೋದ ಮೇಲೆ ವಾಪಸ್ ಬರುತ್ತಾರೆ. ಈಗಾಗಲೇ ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸುವುದಕ್ಕೆ ಹೋಗಿ ನಾಲ್ವರು ಸಿಕ್ಕಿಬಿದ್ದಿದ್ದಾರೆ.

ವಿಚಾರಣೆ ವೇಳೆ ಒಟ್ಟು ಮೂವತ್ತು ಜನರ ತಂಡ ಸಿಟಿ ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಐದಾರು ಟೀಂ ಗಳಾಗಿ ಡಿವೈಡ್ ಆಗಿ ಗಮನ ಬೇರೆಡೆ ಸೆಳೆದು ಕೈಚಳಕ ಶುರುಮಾಡಿದ್ದಾರೆ. ಮತ್ತೆ ಓಜಿಕುಪ್ಪಂ ಗ್ಯಾಂಗ್ ಸಿಟಿಗೆ ಎಂಟ್ರಿಯಾಗಿರುವ ವಿಚಾರ ತಿಳಿದ ಸಿಟಿ ಪೊಲೀಸರು, ನಗರದ ಎಲ್ಲಾ ವಿಭಾಗಗಳಲ್ಲೂ ವಿಶೇಷ ತಂಡ ರಚಿಸಿ ಆರೋಪಿಗಳ ಬೆನ್ನುಬಿದ್ದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *