ಬಾಗಲಕೋಟೆ: ಮೇವು ಕೊಂಡೊಯ್ಯುತ್ತಿದ್ದ ಟ್ರ್ಯಾಕ್ಟರ್ ಲೋಡಿಗೆ ಬೆಂಕಿ ತಗುಲಿದ್ದನ್ನು ಅರಿತ ಚಾಲಕ ಟ್ರ್ಯಾಕ್ಟರನ್ನೇ ಕೆರೆಗೆ ಇಳಿಸಿ ಆಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಾಲಕ ಯಂಕಪ್ಪ ಜಾಣ್ಮೆಯಿಂದ ಟ್ರ್ಯಾಕ್ಟರನ್ನು ಕೆರೆಗೆ ಇಳಿಸುವ ಮೂಲಕ ಆಗಬಹುದಾಗಿದ್ದ ಭಾರೀ ಅನಾಹುತವನ್ನು ತಡೆದಿದ್ದಾರೆ. ಈ ಘಟನೆಯಿಂದಾಗಿ ಸುಮಾರು 30 ಸಾವಿರ ಮೌಲ್ಯದ ಮೇವು ಹಾಗೂ ಟ್ರ್ಯಾಕ್ಟರ್ ಎಂಜಿನಿಗೆ ಹಾನಿಯಾಗಿದೆ. ಬೆಂಕಿ ಅನಾಹುತವನ್ನು ತಪ್ಪಿಸಿದ ಚಾಲಕನಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಟ್ರ್ಯಾಕ್ಟರ್ ಗೆ ಬೆಂಕಿ ತಗುಲಿ, ಕೆರೆಗೆ ಇಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಏನಿದು ಘಟನೆ?
ಕಳೆದ ಎರಡು ದಿನಗಳ ಹಿಂದೆ ಜಮ್ಮನಕಟ್ಟಿ ಗ್ರಾಮದ ಬಳಿ, ರೈತ ಸಂಜೀವ ಜಲಗೇರಿ ಎಂಬವರಿಗೆ ಸೇರಿದ್ದ ಮೇವಿನ ಲೋಡನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸಲಾಗುತ್ತಿತ್ತು. ಈ ವೇಳೆ ಹುಲ್ಲಿನ ಬಣವೆಯ ಎತ್ತರ ಜಾಸ್ತಿಯಾಗಿದ್ದರಿಂದ, ರಸ್ತೆಯಲ್ಲಿ ಹೋಗುತ್ತಿರುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡಿತ್ತು. ಬೆಂಕಿಯನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಚಾಲಕ ಯಂಕಪ್ಪನಿಗೆ ತಿಳಿಸಿದ್ದರು.
ಕೂಡಲೇ ಎಚ್ಚೆತ್ತ ಯಂಕಪ್ಪ ಟ್ರ್ಯಾಕ್ಟರನ್ನು ಗ್ರಾಮಸ್ಥರ ಸೂಚನೆಯಂತೆ ಕೆರೆಯಲ್ಲಿ ಇಳಿಸಲು ಮುಂದಾಗಿದ್ದನು. ಆದರೆ ಎರಡೂ ಕಡೆ ಬಣವೆಗಳಿದ್ದರಿಂದ ಟ್ರ್ಯಾಕ್ಟರನ್ನು ಗ್ರಾಮಸ್ಥರ ಸಹಾಯದಿಂದ ಹೊರಗೆ ತಂದು, ಹತ್ತಿರದ ಕೆರೆಯಲ್ಲಿ ಅರ್ಧದವರೆಗೂ ಇಳಿಸಿದ್ದಾರೆ. ಟ್ರ್ಯಾಕ್ಟರ್ ಕೆರೆಗೆ ಇಳಿಯುತ್ತಿದ್ದಂತೆ ಗ್ರಾಮಸ್ಥರು ನೀರು ಎರಚಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply