ಬಳ್ಳಾರಿಯಲ್ಲಿ ಶ್ರೀರಾಮಲು ಕಟ್ಟಿಹಾಕಲು ಸರ್ಕಾರದಿಂದ ಮಾಸ್ಟರ್ ಪ್ಲಾನ್..!

ಬೆಂಗಳೂರು: ಬಳ್ಳಾರಿ ಲೋಕಸಭಾ ಉಪಚುನಾವಣೆ ಗೆಲ್ಲಲು ದೋಸ್ತಿಗಳ ಮಾಸ್ಟರ್ ಪ್ಲಾನ್ ನಡೆಯುತ್ತಿದ್ದು, ಬಳ್ಳಾರಿಯಲ್ಲಿ ಬಿಜೆಪಿಗಿಂತ ಶ್ರೀರಾಮಲು ಟಾರ್ಗೆಟ್ ಮಾಡಲು ತಂತ್ರ ರೂಪಿಸಲಾಗುತ್ತಿದೆ. ಈ ಮೂಲಕ ಸರ್ಕಾರ ಮೊಳಕಾಲ್ಮೂರು ಶಾಸಕ ಶ್ರೀರಾಮಲು ಅವರನ್ನು ಕಟ್ಟಿಹಾಕಲು ಮಾಸ್ಟರ್ ಪ್ಲಾನ್ ರೆಡಿ ಮಾಡಿದೆ.

ಸಮ್ಮಿಶ್ರ ಸರ್ಕಾರದ ಆ ಮಾಸ್ಟರ್ ಪ್ಲಾನ್ ಏನು..?
ಶ್ರೀರಾಮುಲು ಅವರ ಹಳೆಯ ಪ್ರಕರಣಕ್ಕೆ ಮರು ಜೀವ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಬಳ್ಳಾರಿಯ ಕೌಲಬಜಾರಿನಲ್ಲಿರೂ 57.30 ಗುಂಟೆ ಸರ್ಕಾರಿ ಜಮೀನು ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ದಾಖಲೆ ಸೃಷ್ಟಿಸಿ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ ಅನ್ನೋ ಆರೋಪ ಮಾಡಲಾಗುತ್ತಿದೆ.

ಲೋಕಾಯುಕ್ತ ವಿಚಾರಣಾ ವರದಿಯಲ್ಲಿ ಶ್ರೀರಾಮಲು ಅಕ್ರಮ ಎಸಗಿರುವುದು ಸಾಬೀತಾಗಿದ್ದು, ಶ್ರೀರಾಮಲು ವಿಚಾರಣೆಗೆ ಅನುಮತಿ ಕೇಳಿ ಲೋಕಾಯುಕ್ತ ಪತ್ರ ಬರೆದಿತ್ತು. ಆದ್ರೆ 4 ವರ್ಷಗಳಿಂದ ಹಲವು ಪತ್ರ ಬರೆದರೂ ಶ್ರೀರಾಮುಲು ಮಾತ್ರ ಲೋಕಾಯುಕ್ತಕ್ಕೆ ಉತ್ತರಿಸಲಿಲ್ಲ. ಈಗ ವಿಚಾರಣೆಗೆ ಅನುಮತಿ ಕುರಿತು ಅಭಿಪ್ರಾಯ ನೀಡುವಂತೆ ಸರ್ಕಾರದಿಂದ ಎಜಿಗೆ ಪತ್ರ ಬರೆಯಲಾಗಿದೆ. ಎಜಿ ಅನುಮತಿ ನೀಡಿದ್ರೆ ಶ್ರೀರಾಮಲು ಅವರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುತ್ತದೆ. ಈ ಮೂಲಕ ರಾಮುಲು ಬಳ್ಳಾರಿಯಲ್ಲಿ ಓಡಾಡದಂತೆ ಕಟ್ಟಿ ಹಾಕೋ ಪ್ರಯತ್ನ ಮಾಡಲಾಗುತ್ತದೆ.

ಜಮೀನು ಕಬಳಿಕೆ ಪ್ರಕರಣ ಸಂಬಂಧ ಜಿ ಕೃಷ್ಣಮೂರ್ತಿ ಎಂಬವರು 2013 ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಇದಕ್ಕೆ ಮರುಜೀವ ನೀಡಲು ಕಾಂಗ್ರೆಸ್ ಸಜ್ಜಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *