ರಣರಂಗವಾಯ್ತು ಪ್ರತಿಭಟನೆ: ಪೊಲೀಸರ ಮೇಲೆ ಅಯ್ಯಪ್ಪ ಭಕ್ತರಿಂದ ಕಲ್ಲು ತೂರಾಟ!

ತಿರುವನಂತಪುರ: ಬೆಳಗ್ಗೆಯಿಂದಲೂ ಬೂದಿ ಮುಚ್ಚಿದ ಕೆಂಡದಂತ್ತಿದ್ದ ನಿಳಕ್ಕಲ್ ಬಳಿಯ ಅಯ್ಯಪ್ಪ ಭಕ್ತರ ಪ್ರತಿಭಟನೆ ಸಂಜೆ ವೇಳೆಗೆ ಹಿಂಸಾಚಾರಕ್ಕೆ ತಿರುಗಿದ್ದು, ಭಕ್ತರು ಹಾಗೂ ಪೊಲೀಸರ ನಡುವೇ ಕಲ್ಲು ತೂರಾಟಕ್ಕೆ ನಡೆದಿದೆ.

ನಿಳಕ್ಕಲ್ ಬಳಿ ಬೆಳಗ್ಗೆಯಿಂದ ಶಬರಿಮಲೆಗೆ ತೆರಳುತ್ತಿದ್ದ ಪ್ರತಿ ವಾಹನವನ್ನು ಪರಿಶೀಲನೆ ನಡೆಸಿ ಮಹಿಳಾ ಭಕ್ತರನ್ನು ತಡೆಯುತ್ತಿದ್ದರು. ಈ ವೇಳೆ ವರದಿ ಮಾಡಲು ತೆರಳಿದ್ದ ಮಹಿಳಾ ಪತ್ರಕರ್ತರ ಮೇಲೂ ದೌರ್ಜನ್ಯ ನಡೆಸಿದ ಭಕ್ತರು ಹಲ್ಲೆ ನಡೆಸಿದ್ದರು. ಇದರ ನಡುವೆಯೇ ಪ್ರತಿಭಟನಕಾರರು ಪೊಲೀಸ್ ಬೈಕನ್ನು ನಾಶ ಪಡಿಸಿದ್ದರು. ಅಲ್ಲದೇ ಪೊಲೀಸ್ ಕ್ಯಾಪ್ ಮೇಲೂ ಕಲ್ಲೆಸೆದಿದ್ದರು.

ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಮುಂದಾದ ಪೊಲೀಸರು ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸುವ ಪ್ರಯತ್ನ ನಡೆಸಿದರು.

ಬೆಳಗ್ಗೆಯಿಂದ ನಿರಂತರವಾಗಿ ಪೊಲೀಸರ ಕಾರ್ಯಕರ್ತರ ನಡುವೇ ವಾಗ್ವಾದ ನಡೆಯುತ್ತಲೇ ಇತ್ತು. ಆದರೂ ಅಯ್ಯಪ್ಪ ದರ್ಶನ ಪಡೆಯಲು ಇಷ್ಟಪಟ್ಟಿದ್ದ ಮಹಿಳಾ ಭಕ್ತರಿಗೆ ಬೀಗಿ ಪೊಲೀಸ್ ಭದ್ರತೆ ನೀಡಿದ್ದ ಪೊಲೀಸರು ಅವರನ್ನು ಅಯ್ಯಪ್ಪ ಬೆಟ್ಟದತ್ತ ಕರೆದ್ಯೊಯಲು ಮುಂದಾದರು. ಈ ವೇಳೆ ರೊಚ್ಚಿಗೆದ್ದ ಭಕ್ತರು ಪೊಲೀಸ್ ಜೀಪ್ ಸೇರಿದಂತೆ ಕ್ಯಾಪ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *