ಜಮಖಂಡಿ ಕ್ಷೇತ್ರದ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಂದ ಇಂದು ನಾಮಪತ್ರ ಸಲ್ಲಿಕೆ

ಬಾಗಲಕೋಟೆ: ಜಮಖಂಡಿ ವಿಧಾನಸಭಾ ಉಪಚುನಾವಣೆ ತಾರಕಕ್ಕೇರಿದೆ. ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ ಹಾಗೂ ಕಾಂಗ್ರೆಸ್ ಪಕ್ಷದ ಆನಂದ್ ನ್ಯಾಮಗೌಡ ಅಭ್ಯರ್ಥಿಗಳಿಬ್ಬರು ಬೃಹತ್ ಮರೆವಣಿಗೆ ಮೂಲಕ ಇಂದು ನಾಮಪತ್ರ ಸಲ್ಲಿಸಲಿದ್ದಾರೆ.

ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗಾಗಿ ಎರಡು ಪಕ್ಷದ ಘಟಾನುಘಟಿ ನಾಯಕರು ಇಂದು ಜಮಖಂಡಿಗೆ ಆಗಮಿಸಲಿದ್ದಾರೆ. ಇತ್ತ ಕೈ ಪಕ್ಷದ ಅಭ್ಯರ್ಥಿ ಆನಂದ್ ನ್ಯಾಮಗೌಡ ಬೆಳಗ್ಗೆಯೇ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಖನ ಬೆಳ್ಳುಬ್ಬಿ ಗ್ರಾಮದ ಮಳೆಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ನಂತರ ಕಡಪಟ್ಟಿ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.

ಆನಂದ್ ನ್ಯಾಮಗೌಡ ಪರ ನಾಮಪತ್ರ ಸಲ್ಲಿಕಾ ಕಾರ್ಯಕ್ರಮಕ್ಕಾಗಿ ಸೋಮವಾರವೇ ಜಮಖಂಡಿ ನಗರಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಬೆಳ್ಳಂ ಬೆಳಿಗ್ಗೆ ಪೊಲೋ ಮೈದಾಣದಲ್ಲಿ ಭರ್ಜರಿ ವಾಕಿಂಗ್ ಮಾಡಿದರು. ಸತತ ಒಂಬತ್ತು ರೌಂಡ್ ವಾಕ್ ಮಾಡಿದ ಸಿದ್ದರಾಮಯ್ಯ, ನಗರದ ಜನರಿಗೆ ಕುತೂಹಲ ಮೂಡಿಸಿತು. ಈ ಮೂಲಕ ಮಾಜಿ ಸಿಎಂ ಸಿದ್ಧರಾಮಯ್ಯ ಚುನಾವಣಾ ಪ್ರಚಾರಕ್ಕೆ ಭರ್ಜರಿಯಾಗಿ ತಯಾರಾದಂತೆ ಭಾಸವಾದರು. ಮಾಜಿ ಸಿಎಂ ವಾಕ್ ಮಾಡುತ್ತಿದ್ದರೆ, ಇತ್ತ ಸೇರಿದ ಜನರು ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು.

 

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *