ವಿಷ ಅನಿಲ ಸೇವಿಸಿ ಇಬ್ಬರು ನೌಕರರು ಸಾವು

ಆನೇಕಲ್: ಖಾಸಗಿ ಬ್ಯಾಟರಿ ಕಾರ್ಖಾನೆಯಲ್ಲಿ ವಿಷಾನಿಲ ಸೇವಿಸಿ ಇಬ್ಬರು ನೌಕರರ ಸಾವನ್ನಪ್ಪಿರುವ ಘಟನೆ ಎಕ್ಸಿಡ್ ಬ್ಯಾಟರಿ ಕಂಪೆನಿಯಲ್ಲಿ ನಡೆದಿದೆ.

ಹೊಸೂರು ಸಮೀಪದ ಕೋತಪಲ್ಲಿ ಗ್ರಾಮದ ನಾಗೇಶ್ (25) ಮತ್ತು ಸೂಡಪುರಂ ಗ್ರಾಮದ ಮಂಜುನಾಥ್ (32) ಸಾವನ್ನಪ್ಪಿದ ಗುತ್ತಿಗೆ ಕೆಲಸಗಾರರು. ಕರ್ನಾಟಕದ ಬಿಲ್ಲಾಪುರ ಹಾಗೂ ತಮಿಳುನಾಡಿನ ಸೇವಗಾನ ಪಳ್ಳಿಯಲ್ಲಿರುವ ಕಂಪೆನಿಯಲ್ಲಿ ತ್ಯಾಜ್ಯ ತೊಟ್ಟಿಯನ್ನು ಸರಿಪಡಿಸುವಾಗ ಈ ಅವಘಡ ನಡೆದಿದೆ.

ಸ್ಥಳಕ್ಕೆ ಬಾಗಲೂರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಸಿದ್ದು, ಈ ಘಟನೆ ಸಂಬಂಧಪಟ್ಟಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *