ಗಣೇಶನಿಗಾಗಿ ಪಂಚಕಜ್ಜಾಯ ಪ್ರಸಾದ

ಸಮಸ್ತ ಕನ್ನಡ ನಾಡಿನ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ಗಣೇಶ ಹಬ್ಬದಲ್ಲಿ ಮನೆಯಲ್ಲಿಯೇ ಗಣಪನ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಮೂರು ದಿನ ಒಂದೊಂದು ನೈವೇದ್ಯ ಮಾಡಬೇಕಾಗುತ್ತದೆ. ಹೀಗಾಗಿ ಗಣೇಶನಿಗೆ ಇಷ್ಟವಾಗುವ ಪಂಚಕಜ್ಜಾಯ ನೈವೇದ್ಯ ಮಾಡುವ ವಿಧಾನ ಇಲ್ಲಿದೆ..

ಬೇಕಾಗುವ ಸಾಮಾಗ್ರಿಗಳು
1. ಕಡ್ಲೆ ಬೇಳೆ – 1/4 ಕಪ್
2. ಪುಡಿ ಮಾಡಿದ ಬೆಲ್ಲ – 1/4 ಕಪ್
3. ಒಣ ಕೊಬ್ಬರಿ ತುರಿ – 1/4 ಕಪ್
4. ಕರಿ ಎಳ್ಳು – 1 ಚಮಚ
5. ತುಪ್ಪ – 4 ಚಮಚ
6. ಬಾದಾಮಿ – 5
7. ಗೋಡಂಬಿ – 10
8. ದ್ರಾಕ್ಷಿ – 5
9. ಏಲಕ್ಕಿ – ಎರಡು ಚಿಟಿಕೆ

ಇದನ್ನೂ ಓದಿ: ಗಣೇಶ ಚತುರ್ಥಿಗೆ ಸಂಬಂಧಿಸಿದ ಸುದ್ದಿ ಓದಲು ಕ್ಲಿಕ್ ಮಾಡಿ

ಮಾಡುವ ವಿಧಾನ
* ಮೊದಲಿಗೆ ಒಂದು ಬಾಣಲೆಗೆ ಕಡ್ಲೆ ಬೇಳೆ ಹಾಕಿ ಸಣ್ಣ ಉರಿಯಲ್ಲಿ ಕೆಂಪು ಬಣ್ಣ ಬರುವವರೆಗೆ ಡ್ರೈ ಫ್ರೈ ಮಾಡಿ.
* ಬಳಿಕ ಅದನ್ನು ಒಂದು ತಟ್ಟೆಗೆ ಹಾಕಿಕೊಳ್ಳಿ, ಅದೇ ರೀತಿ ಎಳ್ಳು, ಕೊಬ್ಬರಿಯನ್ನು ಫ್ರೈ ಮಾಡಿಟ್ಟುಕೊಳ್ಳಿ.
* ಇನ್ನೊಂದು ಸಣ್ಣ ಬಾಣಲೆ ಇಟ್ಟು 2 ಚಮಚ ತುಪ್ಪ ಹಾಕಿ ಅದಕ್ಕೆ ದ್ರಾಕ್ಷಿ, ಗೋಡಂಬಿ, ಬಾದಾಮಿ ಹಾಕಿ ಫ್ರೈ ಮಾಡಿಟ್ಟುಕೊಳ್ಳಿ.
* ಉರಿದ ಕಡ್ಲೆ ಬೇಳೆಯನ್ನು ಮಿಕ್ಸ್ ಜಾರಿಗೆ ಹಾಕಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ.
* ಬಾಣಲೆಗೆ 2 ಚಮಚ ತುಪ್ಪ ಹಾಕಿ ಕಾದ ನಂತರ ಬೆಲ್ಲ ಹಾಕಿ ಕರಗುವತನಕ ಮಿಕ್ಸ್ ಮಾಡಿ.
* ಬಳಿಕ ಅದಕ್ಕೆ ಕಡ್ಲೆ ಹಿಟ್ಟು, ಕೊಬ್ಬರಿ, ಎಳ್ಳು, ಫ್ರೈ ಮಾಡಿಟ್ಟಿದ್ದ ಬಾದಾಮಿ, ದ್ರಾಕ್ಷಿ, ಗೋಡಂಬಿಯನ್ನು ಹಾಕಿ ಸಣ್ಣ ಉರಿಯಲ್ಲಿ ಫ್ರೈ ಮಾಡಿ.
* ನಂತರ ಸ್ಟವ್ ಆಫ್ ಮಾಡಿ ಅದಕ್ಕೆ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿದರೆ ಗಣೇಶನಿಗಾಗಿ ನೈವೇದ್ಯ ರೆಡಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *