ಮಂಡ್ಯ: ತಾವು ಬೆಳೆದ ರೇಷ್ಮೆಯನ್ನು ತಮ್ಮ ತೋಟದ ಮನೆಯಲ್ಲಿಯೇ ಹರಾಜು ಹಾಕಿ, ಅದರಿಂದ ಬಂದ ಸಂಪೂರ್ಣ ಹಣವನ್ನು ಕೊಡಗಿನ ಸಂತ್ರಸ್ತರ ನಿಧಿಗೆ ನೀಡುವ ಮೂಲಕ ಜಿಲ್ಲೆಯ ಮಳವಳ್ಳಿಯ ರೈತರೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಮಳವಳ್ಳಿ ಪಟ್ಟಣದ ರೈತ ಬಸವರಾಜು ಎಂಬವರು ಒಂದೂವರೆ ಎಕರೆ ಭೂಮಿಯಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದು, ಈ ಬಾರಿ ಸುಮಾರು 150 ಚಂದ್ರಿಕೆಯಲ್ಲಿ 140 ಕೆಜಿ ರೇಷ್ಮೆ ಗೂಡು ಬೆಳೆ ಬಂದಿತ್ತು. ಇದರಿಂದ ಬರುವ ಹಣ ಕೊಡಗು ಸಂತ್ರಸ್ತರಿಗೆ ಆಸರೆಯಾಗಲಿ ಅಂತಾ ಬಸವರಾಜು ಬಯಸಿದ್ದರು. ಹೀಗಾಗಿ ಇಂದು ರೇಷ್ಮೆ ಗೂಡು ಖರೀದಿದಾರರನ್ನು ತಮ್ಮ ತೋಟಕ್ಕೆ ಕರೆಸಿದ್ದರು.

ರೇಷ್ಮೆ ಖರೀದಿಗೆ ಬಂದಿದ್ದ ವ್ಯಾಪಾರಿಗಳು ಬಸವರಾಜು ಉದಾರತೆ ಮಚ್ಚಿ, ಕೊಡಗು ಸಂತ್ರಸ್ತರಿಗೆ ತಮ್ಮ ಪಾಲು ಕೂಡ ಅಂತಾ ಮಾರುಕಟ್ಟೆ ಬೆಲೆಗಿಂತ 40 ರೂ. ಹೆಚ್ಚುವರಿ ಹಣ ನೀಡಿ ರೇಷ್ಮೆ ಗೂಡು ಖರೀದಿಸಿದ್ದಾರೆ. ಇದರಿಂದಾಗಿ 30 ಸಾವಿರ ರೂ.ಗಿಂತಲೂ ಹೆಚ್ಚು ಹಣ ಸೇರಿದ್ದು, ಅದನ್ನು ಕೊಡಗು ಸಂತ್ರಸ್ತರ ನಿಧಿಗೆ ದಾನ ಮಾಡಿದ್ದಾರೆ.
ಬಸವರಾಜು ನಿರ್ಧಾರಕ್ಕೆ ಕುಟುಂಬದವರೂ ಸಂತಸ ವ್ಯಕ್ತಪಡಿಸಿದ್ದಾರೆ. ಹೀಗೆ ಎಲ್ಲರೂ ನೆರೆ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ಬಸವರಾಜು ಮನವಿ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply