ಸಾಕು ನಾಯಿಗಳನ್ನು ಬಿಟ್ಟು ಬರಲ್ಲ- ರಕ್ಷಣಾ ಸಿಬ್ಬಂದಿಯನ್ನು ವಾಪಾಸ್ ಕಳುಹಿಸಿದ ಮಹಿಳೆ

ತಿರುವನಂತಪುರ: ದೇವರನಾಡು ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆಯೊಬ್ಬರು ರಕ್ಷಣೆಗೆ ಬಂದಿದ್ದ ಸಿಬ್ಬಂದಿಯನ್ನು ನಾನು ನನ್ನ ಸಾಕು ನಾಯಿಗಳನ್ನು ಬಿಟ್ಟು ಬರಲ್ಲ ಎಂದು ವಾಪಾಸ್ಸು ಕಳುಹಿಸಿದ್ದಾರೆ.

ಸುನಿತಾ ಎಂಬವರು ಪ್ರವಾಹದಲ್ಲಿ ಸಿಲುಕಿದ್ದರು. ರಕ್ಷಣಾ ಸಿಬ್ಬಂದಿ ಸುನಿತಾರನ್ನು ರಕ್ಷಿಸಲು ತೆರಳಿದ್ದಾಗ, ಮಹಿಳೆ ತನ್ನ 25 ನಾಯಿಗಳೊಂದಿಗೆ ಬರುತ್ತೇನೆ ಅಂತಾ ಹೇಳಿದ್ದಾರೆ. ರಕ್ಷಣಾ ಸಿಬ್ಬಂದಿ ನಾಯಿಗಳ ರಕ್ಷಣೆಗೆ ಹಿಂದೇಟು ಹಾಕಿದ್ದಾರೆ. ನನ್ನ ನಾಯಿಗಳಿಗೆ ರಕ್ಷಣೆ ಕೊಡದಿದ್ದರೆ ನನಗೆ ನಿಮ್ಮ ಸಹಾಯ ಬೇಡ ಎಂದು ಎಲ್ಲರನ್ನು ವಾಪಾಸ್ಸು ಕಳುಸಿದ್ದರು ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

ನಾವು ಮಹಿಳೆಯ ಮನೆಗೆ ತೆರಳಿದಾಗ ಹಾಸಿಗೆಯ ಮೇಲೆ ಎಲ್ಲ ನಾಯಿಗಳು ಮದುರಿಕೊಂಡು ಮಲಗಿದ್ದವು. ಮನೆಯ ಎಲ್ಲ ಕಡೆಯಲ್ಲೂ ನೀರು ತುಂಬಿಕೊಂಡಿತ್ತು. ಕೊನೆಗೆ ನಾಯಿಗಳನ್ನು ರಕ್ಷಿಸಲು ಒಪ್ಪಿದಾಗ ಮಹಿಳೆ ನಮ್ಮ ಜೊತೆ ಬರಲು ಸಿದ್ಧರಾದರು ಎಂದು ಇಂಟರ್ ನ್ಯಾಷನಲ್ ಹ್ಯೂಮನ್ ಸೊಸೈಟಿಯ ಸಲ್ಲಿ ವರ್ಮಾ ಹೇಳಿದ್ದಾರೆ.

ಸದ್ಯ ಸುನಿತಾ, ಅವರ ಪತಿ, ಸಾಕು ನಾಯಿಗಳನ್ನು ಪ್ರವಾಹ ಪೀಡಿತ ಸ್ಥಳದಿಂದ ಸ್ಥಳಾಂತರಿಸಲಾಗಿದೆ. ಅತಿ ಹೆಚ್ಚು ಹಾನಿಗೊಳಗಾದ ತ್ರಿಶೂರ್ ಜಿಲ್ಲೆಯಲ್ಲಿಯೇ ಸುನಿಯಾ ಸಿಲುಕಿಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

ಪ್ರಧಾನಿ ನರೇಂದ್ರ ಮೋದಿ ಇಂದು ಕೇರಳದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ರಾಜ್ಯಕ್ಕೆ 500 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಪ್ರವಾಹದಲ್ಲಿ ಮೃತ ಕುಟುಂಬಸ್ಥರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದೇ ವೇಳೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಪಿ. ಸತಾಶಿವಂ ಹಾಗು ಕೇಂದ್ರ ಪ್ರವಾಸ ಮಂತ್ರಿ ಕೆ.ಜೆ.ಆಲ್ಫೋನ್ಸ್ ರಿಂದ ನೆರೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *