ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಮಹಾನ್ ವ್ಯಕ್ತಿಗಳು ಕ್ಷೌರಿಕನ ಕಲಾ ಕುಂಚದಲ್ಲಿ

ಬೆಂಗಳೂರು: ಒಮ್ಮೆ ಉಪ್ಪಿ ಸ್ಟೈಲ್, ಮತ್ತೊಮ್ಮೆ ಕೆಂಪೇಗೌಡ ಸ್ಟೈಲ್, ಮಗದೊಮ್ಮೆ ಗಜಿನಿ ಸ್ಟೈಲ್ ಹೀಗೆ ಟ್ರೆಂಡ್ ಗೆ ತಕ್ಕ ಹಾಗೆ ತೆರೆ ಮೇಲೆ ಮಿಂಚಿ ಮರೆಯಾಗುವ ಹೀರೋಗಳ ಹೇರ್ ಸ್ಟೈಲ್ ಕಾಪಿ ಮಾಡೋರ ಮಧ್ಯೆ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಮಹಾನ್ ವ್ಯಕ್ತಿಗಳು ಕ್ಷೌರಿಕನ ಕಲಾ ಕುಂಚದಲ್ಲಿ ಜೀವ ತಳೆದಿದ್ದಾರೆ.

ನಾಗರಾಜ್ ಮತ್ತು ರಾಮು ಅವರು ತಲೆ ಕೂದಲಿಗೆ ಕೇಸರಿ, ಬಿಳಿ, ಹಸಿರು ಬಣ್ಣದ ಚಿತ್ತಾರ ಹಾಗು ಶಿರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ಚಿತ್ರವನ್ನು ದೇಶ ಪ್ರೇಮದ ಸಂಕೇತವಾಗಿ ತಮ್ಮ ಶಿರದ ಮೇಲೆ ಬಿಡಿಸಿಕೊಂಡಿದ್ದಾರೆ. ಈ ಮೂಲಕ ಇವರು ಸ್ವಾತಂತ್ರ್ಯ ದಿನ ಆಚರಿಸಿದ್ದಾರೆ.

ಅಭಿ ಬಾಗಲಗುಂಟೆ ಸ್ಪಿನ್ ಸ್ಪಾನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಗಾಂಧೀಜಿ ಫೋಟೋವನ್ನು ಕಟಿಂಗ್ ಮೂಲಕ ಮೂಡಿಸಿದ್ದರು. ಇದೀಗ ಸುಮಾರು ಆರು ಗಂಟೆ ಸಮಯ ತೆಗೆದುಕೊಂಡು ಫ್ರೀಡಂ ಕಟಿಂಗ್ ಮಾಡಿದ್ದಾರೆ ಎಂದು ಸ್ಪಿನ್ ಸ್ಪಾ ಮಾಲೀಕ ನವೀನ್ ಹೇಳಿದ್ದಾರೆ. ಈ ಫ್ರೀಡಂ ಹೇರ್ ಸ್ಟೈಲ್ ಗೆ ಹಲವರು ಫಿದಾ ಆಗಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *