ಬಳ್ಳಾರಿ: ಶಾಸಕ ಶ್ರೀರಾಮುಲು ಅವರನ್ನು ನಾವೂ ಎರಡೂ ಕ್ಷೇತ್ರಗಳಲ್ಲಿ ನಿಲ್ಲಿಸಿ ತಪ್ಪು ಮಾಡಿದೆವು. ಶ್ರೀರಾಮುಲುರನ್ನು ನಾವು ಬಾದಾಮಿಯಿಂದ ಮಾತ್ರ ಸ್ಪರ್ಧೆ ಮಾಡಿಸಬೇಕಿತ್ತು ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ಯಾರ ವಿಚಾರದಲ್ಲಿ ಸಾಫ್ಟ್ ಕಾರ್ನರ್ ಆಗಿಲ್ಲ. ನನ್ನೊಂದಿಗೆ ಕಾಂಗ್ರೆಸ್ ಶಾಸಕರು ಯಾರು ಸಂಪರ್ಕದಲ್ಲಿಲ್ಲ. ಶಾಸಕ ಶ್ರೀರಾಮುಲು ಅವರನ್ನು ಮುಂದೆ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಉತ್ತಮವಾದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ಮತ್ತೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲಾಗುವುದು. ಅಲ್ಲದೇ ಪ್ರಧಾನಿ ನಮೋ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇಡೀ ಜಗತ್ತೆ ಬೆರಗಾಗಿದೆ ಅವರ ಅಭಿವೃದ್ಧಿ ಕಾರ್ಯ ನೋಡಿದೆಯೆಂದು ತಿಳಿಸಿದ್ರು.

ಜಿಲ್ಲಾ ಉಸ್ತುವಾರಿ ನೇಮಕ ತಡವಾಗಿದೆ. ಪ್ರತಿಪಕ್ಷವಾಗಿ ರಾಜ್ಯಪ್ರವಾಸ ಮಾಡಿ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಜನರ ಪಾಲಿಗೆ ಇದ್ದೂ ಇಲ್ಲದಂತಿದೆ. ತುಘಲಕ್ ದರ್ಬಾರ್ ನಡೆಯುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇಲ್ಲಿವರೆಗಿನ ಅಭಿವೃದ್ಧಿ ಮಾಡಿದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿ. ಹಣಕಾಸಿನ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಲಿ ಅಂತ ಅವರು ಹೇಳಿದ್ರು.
ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಯಾರೇ ಆಗಲಿ ಅಕ್ರಮಗಳ ವಿರುದ್ಧ ಹೋರಾಟ ಮುಂದುವರಿಸುತ್ತೇನೆ. ಕರ್ನಾಟಕ ಏಕೀಕರಣ ಆದ ಪ್ರತ್ಯೇಕ ರಾಜ್ಯದ ಮಾತು ಆಡಬಾರದು. ಅಖಂಡ ಕರ್ನಾಟಕವೇ ನಮ್ಮ ಧ್ಯೇಯವಾಗಿದೆ. ಏಕೀಕರಣಕ್ಕೆ ಧಕ್ಕೆ ಬರುವ ಮಾತು ಯಾರೂ ಆಡಬಾರದು. ಯಾರೂ ಪ್ರತ್ಯೇಕ ರಾಜ್ಯ ಬಯಸುತ್ತಿಲ್ಲ ಅಂದ ಅವರು ಲೋಕಸಭೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಸಕ್ರಿಯ ರಾಜಕಾರಣದ ಕುರಿತು ಪ್ರಕ್ರಿಯಿಸಲು ನಿರಾಕರಿಸಿದ್ರು.

ಮಂಡ್ಯದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭತ್ತದ ಗದ್ದೆಯಲ್ಲಿ ನಾಟಿ ಮಾಡುತ್ತಿರುವುದು ಹಾಸ್ಯಸ್ಪದ ಸಂಗತಿಯಾಗಿದೆ. ಎಚ್ ಡಿಕೆ ಭತ್ತ ನಾಟಿ ಕಾರ್ಯ ಕೇವಲ ಶೋ ಆಗಿದೆ. ಒಂದೆಡೆ ರೈತರ ವಿಚಾರದಲ್ಲಿ ಶೋ ಮಾಡುತ್ತಿರುವ ಮುಖ್ಯಮಂತ್ರಿಗಳು ರೈತರ ಸಂಕಷ್ಠಗಳಿಗೆ ಸ್ಪಂದಿಸಲೇಬೇಕೆಂದು ಹೇಳುತ್ತಾರೆ. ಇನ್ನೊಂದೆಡೆ ಸಾಲ ಮನ್ನಾ ವಿಚಾರದಲ್ಲಿ ದುಡ್ಡಿನ ಗಿಡಿ ನೆಟ್ಟಿಲ್ಲ ಅಂತಾರೆ. ಒಟ್ಟಿನಲ್ಲಿ ಸಿಎಂ ಅವರು ಈ ರೀತಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಅಂತ ಹೇಳಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Leave a Reply