ಬಾದಾಮಿಗೆ ಶಾಸಕರು ಸಿದ್ದರಾಮಯ್ಯನವರೋ, ಚಿಮ್ಮನಕಟ್ಟಿ ಸುಪುತ್ರನೋ-ಸಾರ್ವಜನಿಕರಲ್ಲಿ ಮೂಡಿದೆ ಗೊಂದಲ?

ಬಾಗಲಕೋಟೆ: ಜಿಲ್ಲೆಯ ಬದಾಮಿ ವಿಧಾನಸಭೆ ಕ್ಷೇತ್ರಕ್ಕೆ ಶಾಸಕರು ಯಾರು ಎಂಬ ಗೊಂದಲ ಜನರಲ್ಲಿ ಉಂಟಾಗುತ್ತಿದೆ. ಏಕೆಂದರೆ ಬದಾಮಿ ಶಾಸಕ ಸಿದ್ದರಾಮಯ್ಯನವರು ತಿಂಗಳಿಗೆ ಒಮ್ಮೆ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದರು, ಬಾದಾಮಿ ವಿಧಾನಸಭೆ ಕ್ಷೇತ್ರದ ತುಂಬ ನಿತ್ಯ ಶಾಸಕರು ಎಂಬ ಸ್ಟೀಕರ್ ಅಂಟಿಸಿಕೊಂಡಿರುವ ಕಾರು ಮಾತ್ರ ಓಡಾಡುತ್ತಲೇ ಇರುತ್ತದೆ.

ಜಿಲ್ಲೆಯ ಬಾದಾಮಿ ವಿಧಾನಸಭೆ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಬಿಬಿ ಚಿಮ್ಮನಕಟ್ಟಿ ಚುನಾವಣೆಯ ವೇಳೆ ಸಿದ್ದರಾಮಯ್ಯನವರಿಗೆ ಬಿಟ್ಟುಕೊಟ್ಟಿದ್ದರು. ಆದರೆ ಸದ್ಯ ಸಿದ್ದರಾಮಯ್ಯ ಬದಾಮಿ ಶಾಸಕರಾದರೆ ಬಿಬಿ ಚಿಮ್ಮನಕಟ್ಟಿ ಹಾಗೂ ಅವರ ಪುತ್ರ ಭೀಮಸೇನ್ ಚಿಮ್ಮನಕಟ್ಟಿ ತಾವು ಓಡಾಡುವ ಕಾರಿಗೆ ಶಾಸಕರು ಎಂಬ ಸ್ಟಿಕರ್ ಹಾಕಿಕೊಂಡಿದ್ದಾರೆ. ಜನರಿಂದ ಆಯ್ಕೆಗೊಂಡ ಜನಪ್ರತಿನಿಧಿ ಬಳಸಬೇಕಾದ ಸವಲತ್ತನ್ನ ಚಿಮ್ಮನಕಟ್ಟಿ ಅವರ ಮಗ ಬಳಸುತ್ತಿದ್ದಾರೆ.

ಬಾದಾಮಿ ಕ್ಷೇತ್ರದ ತುಂಬಾ ಶಾಸಕರು ಎಂಬ ಸ್ಟಿಕರ್ ಇರುವ ಕಾರಿನಲ್ಲೇ ಸಂಚರಿಸುತ್ತಿದ್ದು, ಮಾಜಿ ಶಾಸಕ ಚಿಮ್ಮನಕಟ್ಟಿ ಇಲ್ಲವೇ ಅವರ ಪುತ್ರ ಕಾರಿನಲ್ಲಿ ಸಂಚರಿಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *