ಹಚ್ಚಹಸಿರಾಗಿ ಸುಂದರವಾಗಿದ್ದ ಪಾರ್ಕ್ ಅಭಿವೃದ್ಧಿಗೆ ಬರೋಬ್ಬರಿ 1.30 ಕೋಟಿ ರೂ. ಖರ್ಚು!

ಬೆಂಗಳೂರು: ನಗರದ ಶಾಸಕ ಹಾಗೂ ಬಿಬಿಎಂಪಿ ಸದಸ್ಯರು ಸೇರಿ ಹಚ್ಚಹಸಿರಾಗಿ ಎಲ್ಲ ಸೌಲಭ್ಯವಿದ್ದ ಪಾರ್ಕ್ ಅಭಿವೃದ್ಧಿ ಮಾಡುತ್ತೇವೆ ಎಂದು ಸುಮಾರು 1.30 ಕೋಟಿ ಖರ್ಚು ಮಾಡಿದ್ದಾರೆ.

ಶಂಕರಮಠ ಬಳಿಯ ಸ್ವಾಮಿ ವಿವೇಕಾನಂದ ಪಾರ್ಕ್ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಖರ್ಚು ಮಾಡಿದ್ದಾರೆ. ಈಗಾಗಲೇ ಈ ಪಾರ್ಕಿನಲ್ಲಿ ವಾಕಿಂಗ್ ಪಾಥ್ ಗಳಿಗೆ ಕಾಬುಲ್ ಕಲ್ಲು, ಸಾವಿರಾರು ವರ್ಷ ಆದ್ರೂ ಅಲುಗಾಡದ ಕಲ್ಲುಗಳು ಮತ್ತು ಹಸಿರು ಗಿಡ ಮರಗಳು ಇದ್ದವು. ಆದರೆ ಈ ಪಾರ್ಕನ್ನು ಶಾಸಕ ಗೋಪಾಲಯ್ಯ ಹಾಗೂ ಬಿಬಿಎಂಪಿ ಸದಸ್ಯರು ಸೇರಿ ಅಭಿವೃದ್ಧಿ ಮಾಡುತ್ತೇವೆ ಅಂತ ಚೆನ್ನಾಗಿದ್ದ ಗಿಡಗಳನ್ನ, ಕಲ್ಲುಗಳನ್ನ ಕಿತ್ತು ಹೊಸದಾಗಿ ಕಾಂಕ್ರೀಟ್ ಹಾಕಿ ಟೈಲ್ಸ್ ಪಾಥ್ ಮಾಡುತ್ತಿದ್ದಾರೆ.

ಟೈಲ್ಸ್ ಪಾಥ್ ನಲ್ಲಿ ಮಳೆ ನೀರು ಬಂದರೆ ನೀರು ಭೂಮಿಗೆ ಇಂಗೋದೆ ಇಲ್ಲ. ಹಳೆಯ ವಾಕಿಂಗ್ ಪಾಥ್ ಗೆ ಏನಾಗಿತ್ತು. ಅಭಿವೃದ್ಧಿ ಮಾಡಿ ಅಂದರೆ ಅನಾವಶ್ಯಕವಾಗಿ ದುಡ್ಡನ್ನ ಯಾಕೆ ಹಾಳು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ನರೇಂದ್ರ ಬಾಬು ಅವರು ಆಕ್ರೋಶಗೊಂಡು ಪ್ರಶ್ನಿಸಿದ್ದಾರೆ.

ಈ ಪಾರ್ಕ್ ನಲ್ಲಿ ಈಗಾಗಲೇ ಒಂದು ಓಪನ್ ಜಿಮ್ ಇದೆ. ಇದೀಗ ಮತ್ತೊಂದು ಜಿಮ್ ಮಾಡುತ್ತಿದ್ದಾರೆ. ಇದಕ್ಕಾಗಿ 30 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದ್ದ ಗಿಡಗಳನ್ನೆಲ್ಲ ಕಡಿದು ಹಾಕಿ ಹೊಸ ಗಿಡಗಳನ್ನ ನೆಡುವುದಕ್ಕೆ 30 ಲಕ್ಷ ರೂಪಾಯಿಗಳನ್ನ ಬಳಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅಭಿವೃದ್ಧಿ ಹೆಸರಲ್ಲಿ ಚೆನ್ನಾಗಿ ಬೆಳೆದಿದ್ದ ಮರಗಳಿಗೆ ಕೊಡಲಿ ಹಾಕಿದ್ದಾರೆ. ಅಭಿವೃದ್ಧಿ ಕಾಮಗಾರಿ ಬಗ್ಗೆ ಟೆಂಡರ್ ಪಡೆದಿರುವವರು ಯಾರು?, ಯಾವ ನಿಧಿಯಿಂದ ಹಣ ಬಂದಿದೆ? ಎಷ್ಟು ಹಣದಲ್ಲಿ ಕಾಮಗಾರಿ ನಡೆಯುತ್ತಿದೆ? ಅಂತಾ ಸರ್ವಾಜನಿಕರಿಗೆ ತಿಳಿಯುವಂತೆ ನೋಟಿಸ್ ಹಾಕಬೇಕು. ಆದ್ರೆ ಇಲ್ಲಿ ಅದೂ ಕೂಡ ಹಾಕಿಲ್ಲ. ಈ ಪಾರ್ಕ್ ಅಭಿವೃದ್ಧಿಗೆ ಸುಮಾರು 1.30 ಕೋಟಿ ಖರ್ಚು ಮಾಡುತ್ತಿದ್ದು, ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾವು ಈ ಸಂಬಂಧ ದೂರು ದಾಖಲು ಮಾಡುತ್ತೇವೆ ಎಂದು ಮಾಜಿ ಉಪಮೇಯರ್ ಹರೀಶ್ ಎಚ್ಚರಿಸಿದ್ದಾರೆ.

ಮಾಜಿ ಶಾಸಕ ನರೇಂದ್ರ ಬಾಬು

ಈ ಬಗ್ಗೆ ಶಾಸಕ ಗೋಪಾಲಯ್ಯ ಪ್ರತಿಕ್ರಿಯಿಸಿ, ಯಾವುದೇ ದುಂದುವೆಚ್ಚ ಮಾಡುತ್ತಿಲ್ಲ. ಹಣ ದುರುಪಯೋಗ ಮಾಡಿದರೆ ಜನ ಮತ್ತೆ ನನ್ನ ಶಾಸಕ ಮಾಡುತ್ತಿರಲಿಲ್ಲ. ನನ್ನ ಕ್ಷೇತ್ರದ ಇತರೆ ಪಾರ್ಕ್ ನ ಅಭಿವೃದ್ಧಿ ಮಾದರಿಯಲ್ಲೇ ಇಲ್ಲೂ ಅಭಿವೃದ್ಧಿ ಮಾಡುತ್ತಿದ್ದೇವೆ. ಜನರ ಜೊತೆ ಮಾತನಾಡಿಯೇ ಅಲ್ಲಿ ಹೊಸ ಮಾದರಿಯ ಪಾರ್ಕ್ ಮಾಡುತ್ತಿರುವುದು. ಪಾರ್ಕ್ ಉದ್ಘಾಟನೆಯಾದ ಮೇಲೆ ನೋಡಿ ಬೆಂಗಳೂರಿನ ಬೆಸ್ಟ್ ಪಾರ್ಕ್ ಆಗುತ್ತದೆ ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *