ಶೋಕಿಗಾಗಿ ಬೈಕ್ ಕದ್ದು ದರೋಡೆ ಮಾಡುತ್ತಿದ್ದ ಕುಚುಕು ಗೆಳೆಯರು ಬಂಧನ!

ಬೆಂಗಳೂರು: ಶೋಕಿಗಾಗಿ ಬೈಕ್ ಕದ್ದು ದರೋಡೆ ಮಾಡುತ್ತಿದ್ದ ಇಬ್ಬರು ಕುಚುಕು ಗೆಳೆಯರನ್ನು ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಸನ ಮೂಲದ ಸುದೀಪ್ ಹಾಗೂ ದರ್ಶನ್ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ. ಕಳ್ಳತನ ಮಾಡಿದ ಬೈಕ್‍ಗಳಲ್ಲೇ ತೆರಳಿ ಮೊಬೈಲ್, ಸರಗಳ್ಳತನ, ಹಣ ದೋಚುವಿಕೆ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಈ ಆರೋಪಿಗಳ ಖರ್ತಾನಕ್ ಕೆಲಸಗಳಾಗಿತ್ತು.

ಆರೋಪಿಗಳಿಂದ 8 ಪಲ್ಸರ್ ಬೈಕ್, 21 ಮೊಬೈಲ್, ಚಿನ್ನಾಭರಣ ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ಬಟನ್ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಈ ಇಬ್ಬರು ಕಳ್ಳರು ಪಲ್ಸರ್ ಬೈಕ್ ಬಿಟ್ಟು, ಬೇರೆ ಬೈಕ್‍ಗಳನ್ನು ಬಳಸಿ ಕೃತ್ಯ ನಡೆಸುತ್ತಿರಲಿಲ್ಲ. ಖಚಿತ ಮಾಹಿತಿ ಮೇರೆಗೆ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *