ಒಂದು ಕಿ.ಮೀ.ನಷ್ಟು ಅಟ್ಟಾಡಿಸಿ ಬರ್ಬರವಾಗಿ ಕೊಚ್ಚಿ ಕೊಲೆಗೈದ್ರು

ಬೆಂಗಳೂರು: ನಡುರಸ್ತೆಯಲ್ಲೇ ಅಟ್ಟಾಸಿ ಯುವಕನ ಬರ್ಬರ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಡೆದಿದೆ.

ಕಲಾಸಿಪಾಳ್ಯದ ಬಂಬುಬಜಾರ್‍ನಲ್ಲಿ ಕೊಲೆ ನಡೆದಿದ್ದು, ಸಯ್ಯದ್ ಅಮೀನ್ ಕೊಲೆಯಾದ ದುರ್ದೈವಿ. ಸಯ್ಯದ್ ಅಮೀನ್ ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೊರಟಿದ್ದರು. ಈ ವೇಳೆ ಐದಕ್ಕೂ ಹೆಚ್ಚು ಜನರಿಂದ ದುಷ್ಕರ್ಮಿಗಳ ತಂಡ ಲಾಂಗ್ ಹಿಡಿದು ಸಯ್ಯದ್ ಅಮೀನ್‍ನನ್ನು ಸುಮಾರು ಒಂದು ಕಿಲೋಮಿಟರ್‍ನಷ್ಟು ಅಟ್ಟಾಡಿಸಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೊಲೆಯಾದ ಸಯ್ಯದ್ ಅಮೀನ್ ಹಾರ್ಡ್ ವೇರ್ ಕೆಲಸ ಮಾಡಿಕೊಂಡಿದ್ದು, ಆತನ ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಕೊಲೆಗೆ ನಿಖರ ಕಾರಣ ಮಾತ್ರ ತಿಳಿದುಬಂದಿಲ್ಲ. ಕಲಾಸಿಪಾಳ್ಯ ಪೊಲೀಸ್ ಠಾಣೆಯ ಸಮೀಪವೇ ಈ ದುರ್ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೂರು ತಂಡಗಳಾನ್ನಾಗಿ ಮಾಡಿ ಆರೋಪಿಗಳ ಹುಡುಕಾಟ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *