600 ಕೋಟಿ ರೂ. ವೆಚ್ಚದ ಸುವರ್ಣ ವಿಧಾನಸೌಧ ಇಲ್ಲಿವರೆಗೂ ಉಪಯೋಗವಾಗಿಲ್ಲ: ಬಿಎಸ್​ವೈ

ಬೆಳಗಾವಿ: ಜಿಲ್ಲೆಯಲ್ಲಿ 600 ರೂ. ಖರ್ಚು ಮಾಡಿ ಕಟ್ಟಲಾದ ವಿಧಾನಸೌಧ ಇಲ್ಲಿಯವರೆಗೂ ಅದು ಸರಿಯಾಗಿ ಉಪಯೋಗ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನಾ ನಿರತರ ಜೊತೆ ಸಂಧಾನ ನಡೆಸಿ ಮಾತನಾಡಿದ ಅವರು, ಸಿಎಂ ಮಾತಿನಿಂದ ಇಂದು ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಹೀಗಾಗಿ ನಾನು ವಿರೋಧ ಪಕ್ಷದ ನಾಯಕನಾಗಿ ಇಲ್ಲಿಗೆ ಬಂದಿದ್ದೇನೆ. ದೇವೇಗೌಡರೆ ನಿಮ್ಮ ಮಗನೇ ಇವತ್ತು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಎಲ್ಲ ಭಾಗಕ್ಕೂ ಸರಿಯಾಗಿ ಅನುದಾನ ನೀಡಬೇಕು. ನಂಜುಂಡಪ್ಪ ವರದಿ ನನ್ನ ಬಳಿ ಬಂದಾಗ 1800 ಕೋಟಿ ಅನುದಾನವನ್ನು ಕೊಟ್ಟಿದ್ದೇನೆ. ಇಲ್ಲಿನ ಜನಕ್ಕೆ ನ್ಯಾಯ ಒದಗಿಸಿಕೊಡುವ ಕೆಲಸ ನಾನು ಮಾಡುತ್ತೇನೆ ಎಂದು ಹೇಳಿದರು.

ಸದ್ಯ 13 ಜಿಲ್ಲೆಯಲ್ಲಿ ಬಂದ್ ಮಾಡದೆ ಸಹಕರಿಸಿ, ಹೋರಾಟ ಹಿಂದೆ ಪಡೆಯಬೇಕು ಎಂದು ಹೋರಾಟಗಾರರಲ್ಲಿ ವಿನಂತಿಸಿದ ಅವರು, ಅಖಂಡ ಕರ್ನಾಟಕ ಕಟ್ಟಲು 13 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *