ಶ್ರೀರಾಮುಲು ಫೋಟೋಗೆ ಹಾಲು, ಕುಂಕುಮ, ಅರಿಶಿಣ ಅಭಿಷೇಕ – ಇನ್ನೊಂದಕ್ಕೆ ಸಗಣಿ, ಪೊರಕೆ ಸೇವೆ

ರಾಮನಗರ: ಪ್ರತ್ಯೇಕ ರಾಜ್ಯಕ್ಕಾಗಿ ಧ್ವನಿ ಎತ್ತಿರುವ ಶಾಸಕ ಶ್ರೀರಾಮುಲು ವಿರುದ್ಧ ಚನ್ನಪಟ್ಟಣದಲ್ಲಿ ಇಂದು ವಿನೂತನವಾಗಿ ಪ್ರತಿಭಟನೆ ಮಾಡಿದ್ದಾರೆ.

ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಚರ್ಚ್ ರಸ್ತೆಯಲ್ಲಿ ಶಾಸಕ ಶ್ರೀರಾಮುಲು ಅವರ ಎರಡು ಭಾವಚಿತ್ರಗಳನ್ನಿಟ್ಟು ಪ್ರತಿಭಟನೆ ಮಾಡಿದ್ದಾರೆ.

ಒಂದು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಹಾಲಿನ ಅಭಿಷೇಕ, ಕುಂಕುಮ ಮತ್ತು ಅರಿಶಿಣ ಅಭಿಷೇಕ ಮಾಡಿ ಜೈಕಾರ ಹಾಕಿದ್ದಾರೆ. ನಂತರ ಮತ್ತೊಂದು ಭಾವಚಿತ್ರಕ್ಕೆ ಸಗಣಿ ನೀರು ಸುರಿದು ಪೊರಕೆ ಸೇವೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಖಂಡ ಕರ್ನಾಟಕಕ್ಕೆ ಒತ್ತು ನೀಡಿ ರಾಜ್ಯವನ್ನ ಇಬ್ಬಾಗ ಮಾಡದಿದ್ದರೆ ಹಾಲಿನ ಅಭಿಷೇಕ ಮಾಡಿ ಜೈಕಾರ ಹಾಕುತ್ತೇವೆ. ರಾಜ್ಯವನ್ನ ಇಬ್ಬಾಗ ಮಾಡಲು ಮುಂದಾದರೆ ಮುಂದಿನ ದಿನಗಳಲ್ಲಿ ನೇರವಾಗಿಯೇ ಸಗಣಿ ನೀರನ್ನ ಹಾಕಿ ಪೊರಕೆ ಸೇವೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *