ನಿಧಿಗಾಗಿ ಮೂಕ ಪ್ರಾಣಿಯನ್ನೇ ಬಲಿ ಕೊಟ್ಟ ದುಷ್ಕರ್ಮಿಗಳು

ರಾಮನಗರ: ನಿಧಿಯಾಸೆಗೆ ಪಾಳು ಮಂಟಪದಲ್ಲಿ ದಿಗ್ಬಂಧನ ಹಾಕಿ, ಪ್ರಾಣಿಬಲಿ ನೀಡಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಪಿಚ್ಚನಕೆರೆ ಗ್ರಾಮದಲ್ಲಿ ನಡೆದಿದೆ.

ಯಾರೋ ದುಷ್ಕರ್ಮಿಗಳು ನಿಧಿಯಾಸೆಗೆ ಪಾಳುಬಿದ್ದ ಗುಡಿಯಲ್ಲಿ ನಾಲ್ಕು ಅಡಿಯಷ್ಟು ಗುಂಡಿ ತೋಡಿ, ವಾಮಾಚಾರ ನಡೆಸಿದ್ದಾರೆ. ಗ್ರಾಮಸ್ಥರಲ್ಲಿ ಭಯದ ವಾತಾವರಣ ಮೂಡಿದ್ದು, ಗುಡಿಯ ಸುತ್ತಲಿನ ದಿಗ್ಬಂಧನದ ಗೆರೆಗಳನ್ನು ದಾಟಲು ಹೆದರುತ್ತಿದ್ದಾರೆ.

ಗುಡಿಯ ಸುತ್ತಲಿನ ದಿಗ್ಬಂಧನದ ಗೆರೆಗಳನ್ನು ದಾಟಲು ಕೂಡ ಹೆದರುತ್ತಿರುವ ಗ್ರಾಮಸ್ಥರು ಗುಂಡಿಯಲ್ಲಿ ನಿಧಿ ಸಿಕ್ಕಿರಬಹುದೇ ಎಂಬ ಪ್ರಶ್ನೆ ಮೂಡಿದೆ. ಇನ್ನೊಂದೆಡೆ ಅಲ್ಲೊಂದು ಹಾವು ನಿಧಿ ಕಾವಲು ಕಾಯುತ್ತಿದೆ. ಈ ಗುಡಿಯಲ್ಲಿ ನಿಧಿ ಇದೆ ಎಂಬ ವಿಷಯ ಗ್ರಾಮಸ್ಥರಲ್ಲಿ ತಲೆಮಾರುಗಳಿಂದಲೂ ಚರ್ಚೆಯಾಗುತ್ತಿತ್ತು.

Comments

Leave a Reply

Your email address will not be published. Required fields are marked *