ಚಿಕ್ಕಬಳ್ಳಾಪುರದಲ್ಲಿ ಮೂರು ಬೈಕ್ ಗಳು ಬೆಂಕಿಗಾಹುತಿ!

ಚಿಕ್ಕಬಳ್ಳಾಪುರ: ಶಾರ್ಟ್ ಸರ್ಕ್ಯೂಟ್‍ ನಿಂದ ಮೂರು ಬೈಕ್ ಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಳುವನಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಧನಂಜಯ್ ಎಂಬವರಿಗೆ ಸೇರಿದ ಪಲ್ಸರ್, ಟಿವಿಎಸ್ ಎಕ್ಸ್ ಎಲ್ ಸೇರಿದಂತೆ ಬಜಾಜ್ ಸ್ಕೂಟರ್ ಸುಟ್ಟು ಕರಕಲಾಗಿದೆ. ಅಂದಹಾಗೆ ಮನೆಯ ಪಕ್ಕದಲ್ಲೇ ಇದ್ದ ಟ್ರಾನ್ಸ್ ಫರ್ಮ್ ನಿಂದ ಕಿಡಿ ಹೊತ್ತಿಕೊಂಡಿದ್ದು, ಮೊದಲಿಗೆ ತಿಪ್ಪೆಗುಂಡಿಗೆ ತಗುಲಿದೆ. ಬಳಿಕ ರೇಷ್ಮೆಗೂಡಿನ ಚಂದ್ರಿಕೆ ಇಟ್ಟಿದ್ದ ಶೆಡ್ ಗೆ ಬೆಂಕಿ ವ್ಯಾಪಿಸಿ, ಶೆಡ್ ನಲ್ಲಿದ್ದ 150 ಚಂದ್ರಿಂಕೆ ಸೇರಿದಂತೆ 3 ಬೈಕ್ ಗಳು ಸುಟ್ಟು ಕರಕಲಾಗಿವೆ.

ಈ ಹಿಂದೆ ಬೆಸ್ಕಾಂನವರಿಗೆ ಈ ಬಗ್ಗೆ ತಿಳಿಸಿದ್ರೂ ಸಮಸ್ಯೆ ಸರಿಪಡಿಸಿರಲಿಲ್ಲ. ಹೀಗಾಗಿ ಕಳೆದ ರಾತ್ರಿ ಟ್ರಾನ್ಸ್ ಫರ್ಮ್ ನಲ್ಲಿ ಶಾರ್ಟ್ ಸರ್ಕ್ಯೂಟ್‍ ಸಂಭವಿಸಿ ಕಿಡಿ ಹೊತ್ತಿಕೊಂಡು ದುರ್ಘಟನೆ ಸಂಭವಿಸಿದೆ ಅಂತ ರೈತರೊಬ್ಬರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *