ನಿಧಿ ಆಸೆಗೆ ದೇವಸ್ಥಾನವನ್ನೇ ವಿಘ್ನಗೊಳಿಸಿದ ಖದೀಮರು!

ದಾವಣಗೆರೆ: ನಿಧಿ ಆಸೆಗಾಗಿ ಖದೀಮರು ದೇವಸ್ಥಾನವನ್ನೇ ವಿಘ್ನಗೊಳಿಸಿದ ಘಟನೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದಲ್ಲಿ ನಡೆದಿದೆ.

ತೆಲಿಗಿ ಗ್ರಾಮದ ಕೆರೆಯ ಮೇಲಿರುವ ಕೋಡಿ ಬಸವೇಶ್ವರ ದೇವಸ್ಥಾನದಲ್ಲಿ ನಿಧಿಗಾಗಿ ಬಸವೇಶ್ವರ ವಿಗ್ರಹದ ಕೆಳಗೆ ನಾಲ್ಕೈದು ಅಡಿಯಷ್ಟು ಗುಂಡಿ ತೆಗೆದಿದ್ದಾರೆ. ಗುಂಡಿ ತೆಗೆದ ಜಾಗದಲ್ಲಿ ಪೂಜೆ ಮಾಡಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ದೇವಸ್ಥಾನಕ್ಕೆ ಪೂಜೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಕೋಡಿ ಬಸವೇಶ್ವರ ದೇವಸ್ಥಾನದ ವಿಗ್ರಹದ ಕೆಳಗೆ ನಿಧಿ ಇದೆ ಎನ್ನುವ ಗಾಳಿಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿತ್ತು. ಆದ್ದರಿಂದ ಈ ನಿಧಿ ಆಸೆಗೆ ಕಳ್ಳರು ದೇವಸ್ಥಾನದ ವಿಗ್ರಹದ ಕೆಳಗೆ ಗುಂಡಿ ತೆಗೆದಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಈ ಘಟನೆ ಹಲವಾಗಿಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *