ಬಿಬಿಎಂಪಿಯಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದಾರೆ ಮೇಯರ್ ಸಂಪತ್ ರಾಜ್!

ಬೆಂಗಳೂರು: ಬಿಬಿಎಂಪಿಯಲ್ಲಿ ಮೇಯರ್ ಬದಲಾವಣೆ ಆಗುವಾಗ ವಿಶೇಷವಾದ ಹೊಸ ಸಂಪ್ರದಾಯ ಆಚರಣೆಗೆ ಚಿಂತನೆ ಮಾಡಿದ್ದು, ಬೆಳ್ಳಿ ಕೀ ಮತ್ತು ಬ್ಯಾಟನ್ ಹಸ್ತಾಂತರಿಸುವ ಸಮಾರಂಭ ನಡೆಸಲು ಮೇಯರ್ ಸಂಪತ್ ರಾಜ್ ನಿರ್ಧರಿಸಿದ್ದಾರೆ.

ನೂತನ ಮೇಯರ್ ಗೆ ಅಧಿಕಾರ ಹಸ್ತಾಂತರದ ವೇಳೆ ನಿರ್ಗಮಿತ ಮೇಯರ್ ರಿಂದ ಬೆಳ್ಳಿ ಕೀ ಮತ್ತು ಬ್ಯಾಟನ್ ಹಸ್ತಾಂತರಿಸುವ ಹೊಸ ಸಂಪ್ರದಾಯವನ್ನು ಪರಿಚಯಿಸಲು ಸಂಪತ್ ರಾಜ್ ಮುಂದಾಗಿದ್ದಾರೆ.

ಅದೇ ರೀತಿ ಬಿಬಿಎಂಪಿಗೆ ಆಗಮಿಸುವ ನೂತನ ಆಯುಕ್ತರಿಗೂ ಹೊಸ ಸಂಪ್ರದಾಯವನ್ನು ಪರಿಚಯಿಸಿದ್ದು, ನೂತನ ಆಯುಕ್ತರಿಗೆ ಅಧಿಕಾರವನ್ನು ವಹಿಸಿಕೊಳ್ಳುವಾಗ ಕೆಎಂಸಿ ಕಾಯ್ದೆ ಪುಸ್ತಕವನ್ನು ನೀಡಿ ಅಧಿಕಾರವನ್ನು ಹಸ್ತಾಂತರಿಸಲು ಚಿಂತಿಸಿದ್ದಾರೆ.

ಈ ಬಗ್ಗೆ ಕುರಿತು 2018-19ನೇ ಸಾಲಿನ ಬಜೆಟ್ ಪುಸ್ತಕದಲ್ಲಿ ಸಲಹೆ ನೀಡಿದ್ದು, ಸದ್ಯ ಬಿಬಿಎಂಪಿಗೆ ಈ ಹೊಸ ಸಂಪ್ರದಾಯವನ್ನು ಇದೇ ವರ್ಷದಿಂದ ಜಾರಿಗೊಳಿಸಲು ಮೇಯರ್ ಸಂಪತ್ ರಾಜ್ ತೀರ್ಮಾನಿಸಿದ್ದಾರೆ. ಆದ್ರೆ ಈ ಹಿಂದೆ ಈ ರೀತಿಯ ಯಾವುದೇ ಸಂಪ್ರದಾಯಗಳಿರಲಿಲ್ಲ. ಮೇಯರ್ ಆಗಿ ಆಯ್ಕೆಯಾದ ನಾಯಕ ನೇರವಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದರು. ಇನ್ನು ಮುಂದೆ ಅಧಿಕಾರ ಹಸ್ತಾಂತರಕ್ಕಾಗಿ ಕಾರ್ಯಕ್ರಮ ನಡೆಸಲು ಮೇಯರ್ ಸಂಪತ್ ರಾಜ್ ತೀರ್ಮಾನಿಸಿದ್ದಾರೆ.

Comments

Leave a Reply

Your email address will not be published. Required fields are marked *