ಮಾಜಿ ಮಂತ್ರಿ ಊರಲ್ಲೇ ಬೀಳುವ ಸ್ಥಿತಿಯಲ್ಲಿ ಸರ್ಕಾರಿ ಶಾಲೆ!

ಹಾಸನ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಪ್ರಭಾವಿ ಸಚಿವರಾಗಿದ್ದ ಎ ಮಂಜು ಮತ್ತು ಹಾಲಿ ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ಪ್ರತಿನಿಧಿಸೋ ಕ್ಷೇತ್ರದಲ್ಲಿ ಬರೋ ಸರ್ಕಾರಿ ಪ್ರೌಢಶಾಲೆ ಕುಸಿಯುವ ಹಂತದಲ್ಲಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಪಟ್ಟಣದಲ್ಲಿರುವ ಪ್ರೌಢಶಾಲೆಯ ಕಟ್ಟಡ ನಿರಂತರ ಮಳೆಯಿಂದಾಗಿ ಕುಸಿಯುವಂತಾಗಿದೆ. ಆದ್ರೆ ವಿದ್ಯಾರ್ಥಿಗಳು ಅದೇ ಕಟ್ಟಡದಲ್ಲಿ ವಿಧಿ ಇಲ್ಲದೆ ಕುಳಿತುಕೊಳ್ಳುವ ಅನಿವಾರ್ಯ ಸ್ಥಿತಿ ಇದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ವಿದ್ಯಾರ್ಥಿಗಳು ಪ್ರಾಣ ಭಯದೊಂದಿದೆ ತರಗತಿಯಲ್ಲಿ ಕುಳಿತುಕೊಂಡು ಆತಂಕದಿಂದಲೇ ಪಾಠ ಕೇಳುತ್ತಿದ್ದಾರೆ.

ಈ ಕುರಿತಂತೆ ಈಗಾಗಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಸಹ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಜೊತೆಗೆ ವಿದ್ಯಾರ್ಥಿಗಳು ಸಹ ಕಟ್ಟಡ ಸರಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *