ದಾಖಲಾಗಿದ್ದ ರೋಗಿಯನ್ನು ಆಸ್ಪತ್ರೆಯಿಂದ ಹೊರ ಹಾಕಿದ ನರ್ಸ್ ಗಳು

ಮಂಗಳೂರು: ಗ್ಲುಕೋಸ್ ಗಲಾಟೆಯಲ್ಲಿ ಬಡ ರೋಗಿಯೊಬ್ಬರನ್ನು ಮಂಗಳೂರಲ್ಲಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಯ ನರ್ಸ್‍ಗಳೇ ಆಸ್ಪತ್ರೆಯಿಂದಲೇ ಹೊರಹಾಕಿದ್ದಾರೆ.

ಶ್ವಾಸಕೋಶ ತೊಂದರೆಯಿಂದ ಬಳಲ್ತಿದ್ದ ಪುತ್ತೂರಿನ ರಾಜಕುಮಾರ್ ಜೂನ್ 28ರಂದು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ನಿತ್ರಾಣ ಹಿನ್ನೆಲೆಯಲ್ಲಿ ದಿನಕ್ಕೆ ಎಂಟು ಬಾಟಲ್ ಗ್ಲೂಕೋಸ್ ನೀಡುವಂತೆ ವೈದ್ಯರು ನರ್ಸ್ ಗಳಿಗೆ ಸೂಚಿಸಿದ್ದರು.

ವೈದ್ಯರು ಹೋದ ಬಳಿಕ ಫ್ರೀ ಸಿಗುತ್ತೆ ಅಂತಾ ಇಷ್ಟೊಂದು ಗ್ಲುಕೋಸ್ ಕೊಡುವುದಾ? ದಿನಕ್ಕೆ ಎರಡು ಗ್ಲೂಕೋಸ್ ಸಾಕು ಅಲ್ಲಿದ್ದ ನರ್ಸ್ ಗಳು ಎಂದಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ಚಿಕಿತ್ಸೆ ನಿಲ್ಲಿಸಿದ್ದಲ್ಲದೆ, ಬೆಡ್ಡಿನಲ್ಲಿದ್ದ ರೋಗಿಯನ್ನು ನೇರವಾಗಿ ಸಿರಿಂಜ್ ತೆಗೆಯದೇ ಹೊರಕ್ಕೆ ಕಳುಹಿಸಿದ್ದಾರೆ.

ಇಬ್ಬರು ಸಣ್ಣ ಮಕ್ಕಳು ಮತ್ತು ಪತ್ನಿಯ ಜೊತೆ ಹೊರಬಂದಿರುವ ರೋಗಿ ರಾಜಕುಮಾರ್ ಕುಟುಂಬ ಕಂಗಾಲಾಗಿದ್ದು, ವೈದ್ಯಾಧಿಕಾರಿ ಮತ್ತು ನರ್ಸ್ ಗಳ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ, ಸರ್ಕಾರಿ ಆಸ್ಪತ್ರೆ ಆಗಿದ್ರೂ ಸ್ಕ್ಯಾನಿಂಗ್, ಎಕ್ಸ್ ರೇ ಸಹಿತ ಔಷಧಿಗಳಿಗೂ ಹಣ ಪಡೆಯುತ್ತಿದ್ದಾರೆ. ಮೆಡಿಕಲ್ ಗೆ ಚೀಟಿ ಬರೆದುಕೊಟ್ಟು ಬಡ ರೋಗಿಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *