ಪ್ರಿಯಕರನಿಗಾಗಿ ಪತಿಯನ್ನು ಬಿಟ್ಟು ಮೈಸೂರಿಗೆ ಓಡಿಹೋದ ಗೃಹಿಣಿ!

ಮೈಸೂರು: ಪ್ರಿಯಕರನಿಗಾಗಿ ಗೃಹಿಣಿಯೊಬ್ಬಳು ಕಟ್ಟಿಕೊಂಡ ಗಂಡನನ್ನೇ ಬಿಟ್ಟು ಬಂದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ರೈಲ್ವೆ ಕ್ವಾಟ್ರಸ್ ನ ನಿವಾಸಿಯಾಗಿದ್ದ ಸ್ವಾತಿ ಪ್ರಿಯಕರನಿಗಾಗಿ ಪತಿಯನ್ನು ಬಿಟ್ಟು ಬೆಂಗಳೂರಿನಿಂದ ಮೈಸೂರಿಗೆ ಬಂದಿದ್ದಾರೆ. ಅಶೋಕಪುರಂ ನಿವಾಸಿ ರಕ್ಷಿತ್ ಎಂಬಾತನನ್ನು ಕಳೆದ 9 ವರ್ಷಗಳಿಂದ ಸ್ವಾತಿ ಪ್ರೀತಿ ಮಾಡ್ತಿದ್ದರು.

ಹುಡುಗನ ಜಾತಿ ಬೇರೆ ಅಂತಾ ಸ್ವಾತಿ ಮನೆಯವರು ಆಕೆಗೆ ಕಳೆದ ಏಪ್ರಿಲ್ 24ರಂದು ಬೆಂಗಳೂರಿನ ಕೆಜಿ ಹಳ್ಳಿ ನಿವಾಸಿಯಾಗಿರುವ ಪ್ರತಾಪ್ ಎಂಬುವರೊಂದಿಗೆ ಮದುವೆ ಮಾಡಿದ್ದರು. ಆದರೆ ಪತಿಗಿಂತ ಪ್ರಿಯಕರನ ಮೇಲೆಯೇ ಸ್ವಾತಿಗೆ ಪ್ರೀತಿ ಹೆಚ್ಚಾಗಿದ್ದು, ಆತನನ್ನು ಸಂಪರ್ಕಿಸಿ ಬೆಂಗಳೂರಿನಿಂದ ಮೈಸೂರಿಗೆ ಆತನ ಜೊತೆ ಬಂದಿದ್ದಾರೆ.

ಇನ್ನೂ ಪತಿಗೆ ಕೈಕೊಟ್ಟು ಲವರ್ ಜೊತೆ ಓಡಿ ಬಂದಿರುವ ಸ್ವಾತಿ ವಿರುದ್ಧ ಇದೀಗ ಪ್ರತಾಪ್ ಕುಟುಂಬಸ್ಥರು ಮೈಸೂರಿನ ಅಶೋಕಪುರಂ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ವಾತಿ ನಮ್ಮ ಬಳಿ ಇದ್ದ 3 ಕೆಜಿ ಚಿನ್ನವನ್ನು ಕದ್ದಿದ್ದಾಳೆ. ಹೀಗಾಗಿ ಈಕೆಯನ್ನು ಪತ್ತೆ ಹಚ್ಚಿ ಆಕೆಯನ್ನು ನಮಗೆ ಒಪ್ಪಿಸಿ ಎಂದು ಪತ್ನಿ ವಿರುದ್ಧ ಪತಿ ಪ್ರತಾಪ್ ದೂರು ನೀಡಿದ್ದಾರೆ.

ಈ ಕಳ್ಳತನ ಆರೋಪವನ್ನು ತಳ್ಳಿ ಹಾಕಿರುವ ಸ್ವಾತಿ ಅದು ನನ್ನ ಚಿನ್ನ, ಅದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ನನ್ನ ಹತ್ತಿರ ಇವೆ ಅಂತಾ ಹೇಳ್ತಿದ್ದಾರೆ. ಇನ್ನೂ ರಕ್ಷಿತ್ ಮತ್ತು ಸ್ವಾತಿ ನಾವಿಬ್ಬರು ಒಂದಾಗಬೇಕು, ಒಂದಾಗಿ ಬದುಕುಬೇಕು ಅಂತಿದ್ದಾರೆ. ಇಲ್ಲವಾದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ನಮ್ಮಿಬ್ಬರಿಗೆ ಪೊಲೀಸರ ರಕ್ಷಣೆ ಬೇಕೆಂದು ಆಗ್ರಹಿಸಿ ಅಶೋಕ ಪುರಂ ಪೊಲೀಸ್ ಠಾಣೆಯಲ್ಲಿ ಕೂತಿದ್ದಾರೆ.

Comments

Leave a Reply

Your email address will not be published. Required fields are marked *