ಪತ್ನಿಯನ್ನು ಹೆದರಿಸಲು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡ!

ಬೆಂಗಳೂರು: ಪತ್ನಿಗೆ ಹೆದರಿಸಲು ಹೋಗಿ ಪತಿ ಮಹಾಶಯನೊಬ್ಬ ಬೆಂಕಿ ಹಚ್ಚಿಕೊಂಡ ಘಟನೆ ಬೆಂಗಳೂರಿನ ಸಂಜೀವಿನಿನಗರದಲ್ಲಿ ನಡೆದಿದೆ.

ಸಂಜೀವಿನಿನಗರದ ನಿವಾಸಿ ನಾಗರಾಜ್ ತಮ್ಮ ಪತ್ನಿ ಲಲಿತಾ ಜೊತೆ ರಾತ್ರಿ ಜಗಳ ಮಾಡಿದ್ದಾರೆ. ಬಳಿಕ ಸಾಯುತ್ತೇನೆ ಅಂತ ಪತ್ನಿಯನ್ನು ಹೆದರಿಸಲು ಹೋಗಿ, ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಪರಿಣಾಮ ನಾಗರಾಜ್ ದೇಹ ಶೇಕಡಾ 60ರಷ್ಟು ಸುಟ್ಟು ಹೋಗಿದೆ.

ಘಟನೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ನಾಗರಾಜ್ ಅವರನ್ನು ಕೂಡಲೇ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *