ಕುಡಿದ ಮತ್ತಿನಲ್ಲಿ ಬಸ್ಸನ್ನು ಪ್ರಪಾತಕ್ಕೆ ಇಳಿಸಿದ ಚಾಲಕ

ಕಾರವಾರ: ಚಾಲಕನೋರ್ವ ಕುಡಿದು ಮತ್ತಿನಲ್ಲಿ ಬಸ್ ನನ್ನು ಪ್ರಪಾತಕ್ಕೆ ಇಳಿಸಿ ಪ್ರಯಾಣಿಕರ ಪ್ರಾಣಕ್ಕೆ ಕುತ್ತು ತಂದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಿಣಗಾದಲ್ಲಿ ನಡೆದಿದೆ.

ಸದಾಶಿವ ಎಂಬಾತನೇ ಕುಡಿದು ಬಸ್ ಚಲಾಯಿಸಿದ ಚಾಲಕ. ಕಾರವಾರದಿಂದ ಮುದಗಾಕ್ಕೆ ಸುಮಾರು 40 ಜನ ಪ್ರಯಾಣಿಕರುನ್ನು ಹೊತ್ತೊಯ್ಯುತಿದ್ದ ಕೆಎಸ್‍ಆರ್ ಟಿಸಿ ಚಾಲಕ ಕುಡಿದ ಅಮಲಿನಲ್ಲಿ ಕಾರವಾರದ ಮುದುಗಾ ಬಳಿ ನಶೆಯಲ್ಲಿ ಬಸ್ಸ್ ನನ್ನು ಪ್ರಪಾತಕ್ಕೆ ಇಳಿದಿದೆ.

ಮಹಿಳೆ ಸೇರಿ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ದೊಡ್ಡ ದುರಂತ ತಪ್ಪಿದಂತಾಗಿದೆ. ಇನ್ನು ಚಾಲಕ ಕುಡಿದು ಬಸ್ ಚಲಾಯಿಸಿ ಅಪಘಾತ ಮಾಡಿರುವುದರಿಂದ ಕೋಪಗೊಂಡ ಪ್ರಯಾಣಿಕರು ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಚಾಲಕನನ್ನು ಘಟನಾ ಸ್ಥಳದಿಂದ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ.

ಈ ಘಟನೆ ಸಂಬಂಧ ಕಾರವಾರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *