ವಿದ್ಯುತ್ ಶಾಕ್ ನಿಂದ ತಂದೆ-ಮಗ ದುರ್ಮರಣ!

ಮಂಡ್ಯ: ವಿದ್ಯುತ್ ಶಾಕ್ ನಿಂದ ತಂದೆ ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಮನಕಲಕುವ ಘಟನೆ ಮಂಡ್ಯದ ಹೆಮ್ಮಿಗೆ ಗ್ರಾಮದಲ್ಲಿ ನಡೆದಿದೆ.

65 ವರ್ಷದ ಕರಕುಂಡೇಗೌಡ ಮತ್ತು ಆತನ ಮಗ 32 ವರ್ಷದ ಸತೀಶ್ ಮೃತ ದುರ್ದೈವಿಗಳು. ಜಮೀನಿನ ಬಳಿಯಿದ್ದ ರೇಷ್ಮೆ ಸಾಕಾಣಿಕೆ ಮನೆಯಲ್ಲಿ ರೇಷ್ಮೆ ಹುಳಕ್ಕೆ ಸೊಪ್ಪು ಹಾಕಲೆಂದು ಅಪ್ಪ-ಮಗ ಇಬ್ಬರು ಹೋಗಿದ್ದರು.

ಈ ವೇಳೆ ಹುಳಕ್ಕೆ ಸೊಪ್ಪು ಹಾಕುವಾಗ ವಿದ್ಯುತ್ ಶಾರ್ಕ್ ಸರ್ಕ್ಯೂಟ್ ಆಗಿ ಅಪ್ಪ ಮತ್ತು ಮಗ ಇಬ್ಬರಿಗೂ ವಿದ್ಯುತ್ ಶಾಕ್ ಹೊಡೆದಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪ್ಪ, ಮಗನ ಸಾವಿನಿಂದ ರೈತ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಈ ಘಟನೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Comments

Leave a Reply

Your email address will not be published. Required fields are marked *