ಸಚಿವ ಸ್ಥಾನ ವಂಚಿತರಿಗೆ ಡಿಕೆ ಶಿವಕುಮಾರ್ ಸಲಹೆ!

ಬೆಂಗಳೂರು: ಸಂಪುಟ ರಚನೆಯ ಬಳಿಕ ಸಚಿವ ಸ್ಥಾನದ ಆಕಾಂಕ್ಷಿಗಳು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಸಂಬಂಧ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಎಲ್ಲರಿಗೂ ಅವಕಾಶಗಳಿವೆ. ಡೋರ್‍ಗಳು ಕ್ಲೋಸ್ ಆಗಿಲ್ಲ ಅಂತಾ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಭರವಸೆಯನ್ನು ನೀಡಿದ್ದಾರೆ.

ಸಚಿವ ಸ್ಥಾನ ಸಿಗದ ನಾಯಕರನ್ನು ಸಮಾಧಾನಪಡಿಸಲು ಮಾಜಿ ಸಿಎಂ ಸಿದ್ದರಾಮಯ್ಯ ನಿರಾಸಕ್ತಿ ತೋರಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿದ್ದರಾಮಯ್ಯ ವಿಚಾರ ನನಗೆ ಗೊತ್ತಿಲ್ಲ. ಸದ್ಯ ಅವರು ಗೆಲ್ಲಿಸಿರುವ ತಮ್ಮ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲು ತೆರಳಿದ್ದಾರೆ. ಹೈಕಮಾಂಡ್ ಒಬ್ಬೊಬ್ಬರಿಗೂ ಒಂದೊಂದು ಜವಾಬ್ದಾರಿಯನ್ನು ನೀಡಿದ್ದು, ನನಗೆ ನೀಡಿರುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಬೇರೆ ನಾಯಕರು ಏನು ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ ಅಂತಾ ತಿಳಿಸಿದರು.

ಎಲ್ಲ ನಾಯಕರಿಗೂ ಅವಕಾಶಗಳಿವೆ. ಡೋರ್‍ಗಳು ಕ್ಲೋಸ್ ಆಗಿಲ್ಲ. ಮಾಜಿ ಸಿಎಂ ಧರಂಸಿಂಗ್ ಅವರ ಕಾಲದಲ್ಲಿ ನನ್ನನ್ನು ಆರು ತಿಂಗಳು ಸುಮ್ಮನೆ ಕೂರಿಸಿದ್ದರು. ಈ ಹಿಂದೆ ಪರಮೇಶ್ವರ್ ಸಹ ಕೆಲವು ದಿನ ಸುಮ್ಮನೆ ಕುಳಿತಿದ್ದರು. ಅಂದು ನಾವು ತಾಳ್ಮೆಯಿಂದ ಇರಲಿಲ್ವಾ..? ಹಾಗೆ ಇಂದು ಸಹ ಸಚಿವ ಸ್ಥಾನ ವಂಚಿತ ನಾಯಕರು ತಾಳ್ಮೆಯಿಂದ ಇರಬೇಕು ಅಂತಾ ಸಲಹೆ ನೀಡಿದ್ರು.

Comments

Leave a Reply

Your email address will not be published. Required fields are marked *