ಜೆಡಿಎಸ್ ಎಂಎಲ್ ಸಿ ಅಪ್ಸರ್ ಆಗಾ ನಿಧನ

ರಾಮನಗರ: ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯ ಸಯ್ಯದ್ ಅಪ್ಸರ್ ಆಗಾ ಅವರು ಅನಾರೋಗ್ಯದಿಂದ ರಾತ್ರಿ ಮೃತಪಟ್ಟಿದ್ದಾರೆ.

ರಾಮನಗರದ ದೊಡ್ಡ ಮಸೀದಿಯ ನಿವಾಸಿಯಾಗಿದ್ದ ಅಪ್ಸರ್ ಆಗಾ, 2012 ರ ಜೂನ್ 18 ರಂದು ಟಿ.ಎ ಶರವಣ ಜೊತೆಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ರು. ಮೂರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಪ್ಸರ್ ಆಗಾ ರಾತ್ರಿ ಫೋರ್ಟಿಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ಅಂತಿಮ ಸಂಸ್ಕಾರಗಳು ನೆರವೇರಲಿವೆ. ಸಿಎಂ ಎಚ್ ಡಿ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಸೇರಿದಂತೆ ಹಲವು ಮುಖಂಡರು ಅಂತಿಮ ದರ್ಶನದಲ್ಲಿ ಭಾಗಿಯಾಗಲಿದ್ದಾರೆ.

ಮೃತ ಎಂಎಲ್ ಸಿ ಅಪ್ಸರ್ ಆಗಾ ರವರು ಅಪ್ಸರ್ ಆಗಾ ರವರು ಪತ್ನಿ, ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರು ಈ ಹಿಂದೆ ನಗರಸಭಾ ಸದಸ್ಯರಾಗಿದ್ದರು. ಮಾವು, ರೇಷ್ಮೆ ಮೂಲ ವ್ಯವಹಾರ ನಡೆಸುತ್ತಿದ್ದರು.

Comments

Leave a Reply

Your email address will not be published. Required fields are marked *