ಎಫ್‍ಬಿಯಲ್ಲಿ ಆದ ಫ್ರೆಂಡ್‍ಶಿಪ್ ಕೊಲೆಯಲ್ಲಿ ಅಂತ್ಯ!

ಶಿವಮೊಗ್ಗ: ಫೇಸ್‍ ಬುಕ್ ನಲ್ಲಿ ಆದ ಫ್ರೆಂಡ್‍ಶಿಪ್ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕು ಜಕ್ಕಿನಕೊಪ್ಪದಲ್ಲಿ ನಡೆದಿದೆ.

ಸಂಜಯ್ ಕುಮಾರ್ ಮೃತ ದುರ್ದೈವಿ. ಈತ ಕಾಳೇನಹಳ್ಳಿ ಗ್ರಾಮದಲ್ಲಿ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು. ಸಂಜಯ್ ಅದೇ ಗ್ರಾಮದಲ್ಲಿ ಕಲ್ಲು ಕ್ವಾರಿ ನಡೆಸುತ್ತಿದ್ದ ಹರೀಶ್ ಬಾಬು ಹೆಂಡತಿ ಜೊತೆ ಸ್ನೇಹ ಬೆಳೆಸಿದ್ದನು. ಇದು ಗಂಡ ಹರೀಶ್ ಗೆ ಇಷ್ಟವಾಗಿರಲಿಲ್ಲ. ಈ ಬಗ್ಗೆ ಗಂಡ ಹೆಂಡತಿ ನಡುವೆ ಹಲವು ಬಾರಿ ಜಗಳ ಸಹ ಆಗಿತ್ತು.

ಇತ್ತೀಚೆಗೆ ಹರೀಶ್ ಸಂಜಯ್ ನನ್ನು ತನ್ನ ಕ್ವಾರಿಗೆ ಕರೆಸಿದ್ದಾನೆ. ಬಳಿಕ ತನ್ನ ಗೆಳೆಯರ ಜೊತೆ ಸೇರಿ ಆತನನ್ನು ಕೊಂದು ಹಾಕಿದ್ದಾನೆ. ಆದರೆ ಸಂಜಯ್ ನಾಪತ್ತೆ ಆಗಿದ್ದ ಹಿನ್ನೆಲೆಯಲ್ಲಿ ಶಿಕಾರಿಪುರ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಇಂದು ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಸಂಜಯ್ ಶವವನ್ನು ಹೊರ ತೆಗೆದಿದ್ದು, ಆರೋಪಿ ಹರೀಶ್ ಬಾಬು ಜೊತೆಗೆ ಆತನ ಸ್ನೇಹಿತರಾದ ಸುರೇಶ್ ಮತ್ತು ನರಸಿಂಹನನ್ನು ಪೊಲೀಸರು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *