ಮೋದಿಯೆಂಬ ಸಿಂಹವನ್ನು ಅಡ್ಡಗಟ್ಟಲು ನಾಯಿ, ನರಿಗಳು ಒಟ್ಟು ಸೇರಿವೆ- ಜಗ್ಗೇಶ್ ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಮೋದಿಯೆಂಬ ಸಿಂಹವನ್ನು ಅಡ್ಡಗಟ್ಟಲು ನಾಯಿ, ನರಿ ಹಾಗೂ ಜಿಗಣೆಗಳೆಲ್ಲವೂ ಒಟ್ಟು ಸೇರಿವೆ ಅಂತ ನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಅಪಮಿತ್ರ ಮೈತ್ರಿಯನ್ನು ವಿರೋಧಿಸಿ ನಗರದಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಮಾತನಾಡಿದ ಜಗ್ಗೇಶ್, ಭಾರತೀಯ ಜನತಾ ಪಾರ್ಟಿ ಕಪ್ಪು ಪಟ್ಟಿ ಧರಿಸಿ ಕರಾಳ ದಿನವನ್ನು ಆಚರಿಸುತ್ತಿದೆ. ಮತವನ್ನು ನೀಡಿ ಭಾರತೀಯ ಜನತಾ ಪಕ್ಷವನ್ನು ಏಕಪಕ್ಷೀಯವಾಗಿ ಹೊರತಂದಿದ್ದೀರಿ. ಆದ್ರೆ ವಾಮಮಾರ್ಗದಿಂದ ನಮ್ಮನ್ನು ಪಕ್ಕಕಿಡಬೇಕು ಎನ್ನುವ ಷಡ್ಯಂತ್ರ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಬೆವರಿನ ಹನಿಗೆ ಬೆಲೆ ಕೊಡುವ ಈ ಮೈತ್ರಿ ಸರ್ಕಾರಕ್ಕೆ ಧಿಕ್ಕಾರ ಅಂತ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮೋದಿಯೆಂಬ ಈ ರಾಜ್ಯದ ಸಿಂಹವನ್ನು ಅಡ್ಡಗಟ್ಟಲು ನಾಯಿ, ನರಿ, ಜಿಗಣೆಗಳೆಲ್ಲ ಒಟ್ಟಿಗೆ ಸೇರಿರುವ ಕಾರ್ಯಕ್ರಮಗಳನ್ನು ನಾವು ನೀವು ನೋಡ್ತಾ ಇದ್ದೀವಿ. ನಿರೋದ್ಯೋಗಿ ಸಂಸ್ಥೆಗಳು ಮೋದಿಯವರ ಹೊಡೆತಗಳನ್ನು ತಾಳಲಾರದೆ ಮೂಲೆಗುಂಪಾದಂತಹ ಎಲ್ಲರೂ ಇವತ್ತು ಒಂದು ವೇದಿಕೆಯಲ್ಲಿ ಸೇರಿ ಮೋದಿಯನ್ನು ಮಣಿಸಲು ನಾವಿದ್ದೇವೆ ಎಂಬ ಭ್ರಮೆ ಹಾಗೂ ಚಿಂತನೆಯಿಂದ ಬಂದು ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇಂದು ಈ ನಾಡಿನ ಜನತೆಯ ಪರವಾಗಿ ಹೇಳುತ್ತಿದ್ದೇವೆ, ನಿಮಗೆಲ್ಲರಿಗೂ ಕೂಡ ಅದೇ ರೀತಿಯ ಮುಖಭಂಗ ಇನ್ನೂ ಮೂರು ತಿಂಗಳಲ್ಲಿ ಆಗಿಲ್ಲವೆಂದಲ್ಲಿ ಬೃಂದಾವನದಲ್ಲಿ ರಾಯರಿಲ್ಲ ಎನ್ನುಂತಹ ಮಾತನ್ನು ಹೇಳಲು ಇಷ್ಟ ಪಡುತ್ತೇನೆ ಅಂತ ಅವರು ಜಗ್ಗೇಶ್ ಸವಾಲೆಸೆದರು.

Comments

Leave a Reply

Your email address will not be published. Required fields are marked *