ಕುಡಿದ ಮತ್ತಿನಲ್ಲಿ ಕ್ಯಾಂಟರ್ ಚಾಲನೆ – ಮೂವರಿಗೆ ಗಾಯ, ಸ್ಕೂಟರ್, ಅಂಗಡಿ ಜಖಂ

ಮಂಡ್ಯ: ಕುಡಿದ ಮತ್ತಿನಲ್ಲಿದ್ದ ಚಾಲಕ  ಕ್ಯಾಂಟರನ್ನು ಮನಸ್ಸೋ ಇಚ್ಚೆ ಓಡಿಸಿದ್ದ ಕಾರಣ ಅಪಘಾತ ಸಂಭವಿಸಿ ಮೂವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದ ಪಂಪ್ ಹೌಸ್ ಬಳಿ ನಡೆದಿದೆ.

ಕುಮಾರ್ ಎಂಬಾತ ಕುಡಿದು ಚಾಲನೆ ಮಾಡಿದ ಚಾಲಕ. ಕಂಠ ಪೂರ್ತಿ ಮದ್ಯ ಸೇವಿಸಿದ್ದ ಕುಮಾರ್ ಲಾರಿ ಚಾಲನೆ ಮಾಡಿದ್ದು, ಈ ವೇಳೆ ಲಾರಿ ನಿಯಂತ್ರಣ ತಪ್ಪಿ ಅಡ್ಡದಿಡ್ಡಿಯಾಗಿ ಚಲಿಸಿದೆ. ಕ್ಯಾಂಟರ್ ಬರುತ್ತಿದ್ದನ್ನು ಕಂಡ ಸಾರ್ವಜನಿಕರು ಭಯದಿಂದ ದಿಕ್ಕಾಪಾಲಾಗಿ ಓಡಿದ್ದು, ಮೂವರು ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡಿರುವರಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಕ್ಯಾಂಟರ್ ಯದ್ವಾತದ್ವಾ ಚಾಲನೆ ಮಾಡಿದ್ದರಿಂದ ರಸ್ತೆ ಬದಿಯ ಸೆಲೂನ್ ಶಾಪ್ ಸೇರಿದಂತೆ ಹಲವು ಅಂಗಡಿಗಳಿಗೆ ಡಿಕ್ಕಿ ಹೊಡೆದಿಯಾಗಿದೆ. ಬಳಿಕ ಎರಡು ಸ್ಕೂಟರ್ ಗೆ ಡಿಕ್ಕಿಯಾಗಿದ್ದು ಜಖಂಗೊಂಡಿದೆ. ಈ ವೇಳೆ ಕ್ಯಾಂಟರ್ ನಿಂತಿದ್ದು ತಕ್ಷಣ ಸ್ಥಳೀಯರು ಚಾಲಕನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಕೆಆರ್ ಎಸ್ ಪೊಲೀಸ್ ಠಾಣೆಯ ಪೊಲೀಸರು ಚಾಲಕ ಕುಮಾರ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

Comments

Leave a Reply

Your email address will not be published. Required fields are marked *