ಹೊಟ್ಟೆಯಲ್ಲಿ ಕೂಸು ಇಟ್ಟುಕೊಂಡು ಜಟ್ಟೆಪ್ಪ ಎಂದು ಹೆಸರಿಟ್ಟಂತೆ- ಬಿಎಸ್‍ವೈಗೆ ಎಸ್.ಆರ್.ಪಾಟೀಲ್ ಟಾಂಗ್

ಬಾಗಲಕೋಟೆ: ಹೊಟ್ಟೆಯಲ್ಲಿ ಕೂಸು ಇಟ್ಟುಕೊಂಡು ಜಟ್ಟೆಪ್ಪ ಎಂದು ಹೆಸರಿಟ್ಟಂತೆ ಬಿಎಸ್‍ವೈ ಹೇಳಿಕೆ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಟಾಂಗ್ ನೀಡಿದ್ದಾರೆ.

ಮೇ 17 ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಎಂಬ ಬಿಎಸ್‍ವೈ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ 120 ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಾದಾಮಿಯಲ್ಲಿ ಗೌರವಯುತ ಮತಗಳ ಅಂತರದಿಂದ ಸಿಎಂ ಗೆಲ್ಲುತ್ತಾರೆ ಎಂದ ಅವರು, ಸಿಎಂ ವಿರುದ್ಧ 32 ಸಾವಿರ ಕೋಟಿ ರೂ. ಹಗರಣ ಮಾಡಿದವರು ಸ್ಪರ್ಧಿಸಿದ್ದಾರೆಂದು ಆರೋಪಿಸಿದರು.

ದಲಿತ ಸಿಎಂ ತೀರ್ಮಾನ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಸೋಲಿನ ಭೀತಿ, ಆತಂತ್ರ ಸ್ಥಿತಿ ಎನ್ನುವ ಉದ್ದೇಶದಿಂದ ಈ ಹೇಳಿಕೆಯನ್ನು ನೀಡಿಲ್ಲ. ಸಿಎಂ ಯಾರೆಂದು ನಿರ್ಧರಿಸುವುದು ಹೈಕಮಾಂಡ್, ಯಾರು ಶಾಸಕಾಂಗ ಪಕ್ಷದ ನಾಯಕರಾಗುತ್ತಾರೊ ಅವರು ಸಿಎಂ ಆಗ್ತಾರೆ. ಇದರಲ್ಲಿ ಹೈಕಮಾಂಡ್ ನಿರ್ಧಾರ ಅಂತಿಮ ಎಂದರು.

Comments

Leave a Reply

Your email address will not be published. Required fields are marked *