ಚಾಮರಾಜನಗರಕ್ಕೆ ಮೋದಿ ಬರದೇ ಇರುವುದು ನಾಚಿಗೇಡು- ವಾಟಾಳ್ ನಾಗರಾಜ್ ವಾಗ್ದಾಳಿ

ಚಾಮರಾಜನಗರ: ಮೌಢ್ಯತೆಗೆ ಜೋತು ಬಿದ್ದು ಪ್ರಧಾನಿ ನರೇಂದ್ರ ಮೋದಿ ಚಾಮರಾಜನಗರಕ್ಕೆ ಬರದೇ ಇರುವುದು ನಾಚಿಕೆ ಗೇಡಿನ ಸಂಗತಿ ಎಂದು ಕನ್ನಡ ಪರ ಹೋರಾಟಗಾರ ಹಾಗೂ ಚಾಮರಾಜನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಾಟಾಳ್ ವಾಗ್ದಾಳಿ ನಡೆಸಿದ್ದಾರೆ.

ಚಾಮರಾಜನಗರದ ಉಡಿಗಾಲದಲ್ಲಿ ಮತ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚಾಮರಾಜನಗರದ ಬಗ್ಗೆ ಏನು ಗೊತ್ತು. ಮೋದಿಗೆ ಏನು ಗೊತ್ತು, ಅಧಿಕಾರ ಹೋಗುತ್ತೆ ಅನ್ನೋ ಮೌಢ್ಯ ಕಾರಣ ಇಟ್ಟುಕೊಂಡು ಚಾಮರಾಜನಗರಕ್ಕೆ ಅವರು ಬಂದಿಲ್ಲ ಅಂತ ಟೀಕಿಸಿದ್ರು.

ಮೋದಿಯವರಿಗೆ ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಹೋಗುತ್ತೆ ಅಂತಾ ಹೇಳಿದ್ದಾದ್ರು ಯಾರು? ಅವರ ಮೇಲೆ ನಂಗೆ ಗೌರವ ಇದೆ. ಆದರೆ ಬಿಜೆಪಿ ಮುಖಂಡರು ಮೋದಿಯನ್ನು ದಾರಿ ತಪ್ಪಿಸಿದ್ದಾರೆ ಹೀಗಾಗಿ ಚಾಮರಾಜನಗರಕ್ಕೆ ಬಂದಿಲ್ಲ. ಇದರಿಂದ ಚಾಮರಾಜನಗರಕ್ಕೆ ಕಳಂಕ ತಂದಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವ ಚಿಂತನೆ ನಡೆಸುತ್ತಿದ್ದೇನೆ ಅಂತ ವಾಟಾಳ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *