ಐಟಿ ದಾಳಿ ತಡೆಯಲು 10 ಕೋಟಿ ರೂ. ಹಣ ಕೇಳಿದ್ದ ನಕಲಿ ಅಧಿಕಾರಿಗಳ ಬಂಧನ

ಬೆಂಗಳೂರು: ಹಾಲಿ ಸಿಎಂ ಮತ್ತು ಮಾಜಿ ಸಿಎಂ ನಿನ್ನ ಬಳಿ ಹಣ ಇಟ್ಟಿದ್ದಾರೆ. ನಿನ್ನ ಮನೆಯ ಮೇಲೆ ಐಟಿ ದಾಳಿ ಮಾಡೋದಕ್ಕೆ ದೆಹಲಿಯಿಂದ ತಂಡ ಬಂದಿದೆ ಎಂದು ಬೆದರಿಕೆ ಹಾಕಿದ್ದ ನಕಲಿ ಐಟಿ ಅಧಿಕಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿಷಿ ಗಣೇಶ್ ದೀಕ್ಷಿತ್ ಅವರಿಗೆ ಬೆದರಿಕೆ ಹಾಕಿದ್ದ ನಕಲಿ ಅಧಿಕಾರಿಗಳು, ಐಟಿ ದಾಳಿಯನ್ನು ತಡೆಯಲು ಹತ್ತು ಕೋಟಿ ರೂ. ವನ್ನು ತಮಿಳುನಾಡಿನ ಹೊಸೂರಿಗೆ ತಂದುಕೊಡುವಂತೆ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಹಣ ಕೊಡುವ ಸೋಗಿನಲ್ಲಿ ಹೋದ ಉತ್ತರ ವಿಭಾಗ ಪೊಲೀಸರು, ಆರೋಪಿಗಳಾದ ವೆಂಕಟೇಶ್ ಸೇರಿದಂತೆ ಮೂವರು ನಕಲಿ ಐಟಿ ಅಧಿಕಾರಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೀಕ್ಷಿತ್ ಅವರು ಕೇಂದ್ರ ಸಚಿವ ಸದಾನಂದಗೌಡ, ಸಿಎಂ ಸಿದ್ದರಾಮಯ್ಯ ಜೊತೆಯಲ್ಲಿ ಗುರುತಿಸಿಕೊಂಡಿದ್ದರು. ಇವರಿಬ್ಬರು ಹಣವನ್ನು ದೀಕ್ಷಿತ್ ಅವರ ಮನೆಯಲ್ಲಿ ಇಟ್ಟಿದ್ದಾರೆ ಅಂತ ಆರೋಪಿಗಳು ಬೆದರಿಕೆ ಹಾಕಿದ್ದರು.

Comments

Leave a Reply

Your email address will not be published. Required fields are marked *